Monday, April 29, 2024
spot_imgspot_img
spot_imgspot_img

ವಿಟ್ಲ: ವಿಠ್ಠಲ ಪ್ರೌಢ ಶಾಲೆಯ ಚಿತ್ರಕಲಾ ಸಂಘ ಹಾಗೂ ವಿಟ್ಲ ರೋಟರಿ ಕ್ಲಬ್ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ

- Advertisement -G L Acharya panikkar
- Advertisement -

ವಿಟ್ಲ: ವಿಠ್ಠಲ ಪ್ರೌಢ ಶಾಲೆಯ ಚಿತ್ರಕಲಾ ಸಂಘ ಹಾಗೂ ವಿಟ್ಲ ರೋಟರಿ ಕ್ಲಬ್ ವತಿಯಿಂದ ವಿಟ್ಠಲ ಪ್ರೌಢ ಶಾಲೆಯ ಸಭಾ ಭವನದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ವಿಟ್ಠಲ ಎಜುಕೇಶನ್ ಸೊಸೈಟಿ ಕೋಶಾಧಿಕಾರಿ ಬಾಬು ಕೊಪ್ಪಳ ಉದ್ಘಾಟಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಶಾಲಾ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಿಟ್ಲದ ಹಿರಿಯ ಫೋಟೋಗ್ರಾಫರ್‌ಗಳಾದ ಫೋಟೋಮೆಟಿಕ್ ಸ್ಟುಡಿಯೋ ಮಾಲಕ ಶ್ರೀ ಕೃಷ್ಣ ಭಟ್ ಮತ್ತು ಶ್ರೀದೇವಿ ಸ್ಟುಡಿಯೋ ಮಾಲಕ ಗೋಪಾಲಕೃಷ್ಣ ಇವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಹಳೆಯ ಕ್ಯಾಮರಾಗಳು, ಫೋಟೋ ಪ್ರಿಂಟಿಂಗ್ ಸಲಕರಣೆಗಳು ಮತ್ತು ಛಾಯಾಚಿತ್ರಗಳ ಪ್ರದರ್ಶನ ನಡೆಸಲಾಯಿತು. ವಿಟ್ಲದ ಫೋಟೋಗ್ರಾಫರ್‌ಗಳಾದ ಪ್ರವೀಣ್ ವಿಟ್ಲ, ಸದಾಶಿವ ಬನ, ಕೇಶವ, ಪ್ರವೀಣ್ ಸಾಲಿಯಾನ್, ವಿನೋದ್ ವಿಟ್ಲ ಮತ್ತು ಮೋಹನ್ ಇವರನ್ನು ಗೌರವಿಸಲಾಯಿತು. ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಚಿತ್ರಕಲಾ ಶಿಕ್ಷಕ ಉದಯ್ ವಿಟ್ಲ, ಶಿಕ್ಷಕ ರಮೇಶ್ ಬಿ ಕೆ, ರೋಟರಿ ಸದಸ್ಯರಾದ ಭಾಸ್ಕರ ಶೆಟ್ಟಿ, ಅಣ್ಣಪ್ಪ ಸಾಸ್ತಾನ, ಮೋಹನ್ ಮೈರ ಮತ್ತು ವಸಂತ ಶೆಟ್ಟಿ, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಭಾಗವಹಿಸಿದ್ದರು.

Insta: glacharyajewellers
Fb: glacharya
- Advertisement -

Related news

error: Content is protected !!