Saturday, June 28, 2025
spot_imgspot_img
spot_imgspot_img

ವಿಟ್ಲ: ಪಡಿತರ ಗ್ರಾಹಕರ ಪರದಾಟ; ಆಹಾರ ಇಲಾಖೆಯಿಂದ ಸಾಫ್ಟ್‌ ವೇರ್‌ ಬದಲಾವಣೆ

- Advertisement -
- Advertisement -

ಶೀಘ್ರ ಬಗೆ ಹರಿಸುವಂತೆ ಆಗ್ರಹ

ವಿಟ್ಲ: ಆಹಾರ ಇಲಾಖೆಯಿಂದ ಸಾಫ್ಟ್‌ವೇರ್ ಬದಲಾವಣೆಯಾದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಪಡಿತರ ವಿತರಣೆಯಲ್ಲಿ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿರಲಿಲ್ಲ. ಆದರೆ ಇಂದು ಸಾಫ್ಟ್‌ವೇರ್ ತಂತ್ರಾಂಶ ಉಪಯೋಗಕ್ಕೆ ಅನುಕೂಲಕವಾಗಿ ಪರಿಣಮಿಸಿದೆ. ಆದರೂ ಅನೇಕ ಸೊಸೈಟಿಗಳಲ್ಲಿ ಸರ್ವರ್ ಸಮಸ್ಯೆ ಕಾಡುತ್ತಿದೆ. ಅನೇಕ ಕೇಂದ್ರಗಳಲ್ಲಿ ಸರ್ವರ್ ಇದ್ದರು ಜನಜಂಗುಳಿಯಿಂದ ಕೂಡಿದೆ.

ಅದರಂತೆ ವಿಟ್ಲ, ಇಡ್ಕಿದು, ವಿಟ್ಲ ಮುಡ್ನೂರು, ಕಲ್ಲಡ್ಕ ಇನ್ನೂ ಅನೇಕ ಗ್ರಾಮ ಸೊಸೈಟಿಗಳಲ್ಲಿ ಸರ್ವರ್ ಸಮಸ್ಯೆ ಇದ್ದು ಜನರು ಪರದಾಡುವಂತಾಗಿದೆ.

ಇನ್ನೇನು ಸಾಲು ಸಾಲು ರಜೆಗಳು ಬರಲಿದ್ದು, ಇದೇ ರೀತಿ ಸರ್ವರ್ ಸಮಸ್ಯೆ, ಜನ ಜಂಗುಳಿಯ ಸಮಸ್ಯೆಯಾದರೆ ಅನೇಕರು ಈ ತಿಂಗಳ ಪಡಿತರ ವಿತರಣೆಯಿಂದ ಸಿಗುವ ಸೌಲಭ್ಯವನ್ನು ಪಡೆಯುವಲ್ಲಿ ವಂಚಿತರಾಗುವ ಸಾಧ್ಯತೆ ಇದೆ. ಸಾರ್ವಜನಿಕರು ಈ ಕುರಿತು ಸರಕಾರ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

- Advertisement -

Related news

error: Content is protected !!