Saturday, June 28, 2025
spot_imgspot_img
spot_imgspot_img

ಕಳೆಂಜಿಮಲೆ ರಕ್ಷಿತಾರಣ್ಯವನ್ನು ನುಂಗಲು ಮುನ್ನುಗ್ಗುತ್ತಿವೆ ಬೆಂಕಿಯ ಕಿನ್ನಾಲೆಗಳು- ಸಂಪೂರ್ಣ ಹತೋಟಿಗೆ ತರಲು ಹೆಲಿಕಾಪ್ಟರ್‍ ಒಂದೇ ಪರಿಹಾರ..!

- Advertisement -
- Advertisement -

ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡು, ಇಡೀ ರಕ್ಷಿತಾರಣ್ಯವನ್ನು ಬೆಂಕಿ ಆವರಿಸಿ ಉರಿಯುತ್ತಿರುವ ಬಗ್ಗೆ ವರದಿಯಾಗಿದೆ.

ಇಂದು ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಭೂಮಿಯನ್ನೇ ಸುಡುವ ಬಿಸಿಲಿನ ತಾಪಕ್ಕೆ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಕಳೆದ ಕೆಲ ಗಂಟೆಗಳಿಂದ ಎಡೆಬಿಡದೆ ಅಗ್ನಿಶಾಮಕ ದಳದವರು ಕಾರ್ಯಚರಣೆ ನಡೆಸುತ್ತಿದ್ದರೂ ಹತೋಟಿಗೆ ಬರುತ್ತಿಲ್ಲ.

ಬೆಂಕಿ ನಂದಿಸುವಲ್ಲಿ ಎರಡು ಅಗ್ನಿಶಾಮಕ ವಾಹನಗಳು, ಅರಣ್ಯ ಸಿಬ್ಬಂದದಿಗಳು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲಾ ಸಾರ್ವಜನಿಕರು ಹರಸಾಹಸ ಪಡುತ್ತಿದ್ದಾರೆ. ಆದರೆ ಮೂರು ಕಡೆಗಳಿಂದ ರಕ್ಷಿತಾರಣ್ಯವನ್ನು ನುಂಗಲು ಮುನ್ನುಗ್ಗುತ್ತಿವೆ ಬೆಂಕಿಯ ಕಿನ್ನಾಲೆಗಳು. ಹತೋಟಿಗೆ ಬಾರದ ಬೆಂಕಿಯ ಜ್ವಾಲೆಗಳನ್ನು ಸಂಪೂರ್ಣ ಹತೋಟಿಗೆ ತರಲು ಹೆಲಿಕಾಪ್ಟರ್‍ ಒಂದೇ ಪರಿಹಾರ ಎಂಬ ಮಾತುಕತೆ ನಡೆಯುತ್ತಿದೆ.

- Advertisement -

Related news

error: Content is protected !!