Friday, June 27, 2025
spot_imgspot_img
spot_imgspot_img

ವಿಟ್ಲ: ಬ್ಯಾಂಕ್ ಸಾಲ ಪಡೆದು ಮರು ಪಾವತಿ ಮಾಡದ ಗ್ರಾಹಕನಿಗೆ ವಾರೆಂಟ್ ನೋಟಿಸ್ ಜಾರಿ: ನ್ಯಾಯಂಗ ಬಂಧನ

- Advertisement -
- Advertisement -

ವಿಟ್ಲ: ಬ್ಯಾಂಕ್ ಸಾಲ ಪಡೆದು ಮರು ಪಾವತಿ ಮಾಡದೆ ಇದ್ದ ಗ್ರಾಹಕನನ್ನು ಪೊಲೀಸರು ನ್ಯಾಯಲಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನ ವಿಧಿಸಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿಟ್ಲ ವೆಂಕಟರಮಣ ಕೊ ಆಪರೇಟಿವ್ ಸೊಸೈಟಿಯಲ್ಲಿ ಆರೋಪಿ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಕಾಶಿಮಠ ನಿವಾಸಿ ಹರೀಶ್ ವಿ ಜಿ ಎಂಬಾತ ಸಾಲ ಪಡೆದು ಮರು ಪಾವತಿ ಮಾಡದೆ ಇದ್ದು, ಈತನ ಮೇಲೆ ಎಸಿ ಜೆ ಮತ್ತು ಜೆ ಎಮ್ ಎಪ್ ಸಿ ನ್ಯಾಯಾಲಯ ಬಂಟ್ವಾಳ ರವರ ಸಿ ಸಿ ನಂಬ್ರ: 105/2019 ಕಲಂ: 138 ಎನ್ ಐ ಕಾಯ್ದೆ ಯಲ್ಲಿ ವಾರೆಂಟ್ ಹೊರಡಿಸಿರುತ್ತಾರೆ.

ಫೆ. 4 ರಂದು ವಿಟ್ಲ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಯವರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿ ಹರೀಶ್ ಎಂಬಾತನಿಗೆ ನ್ಯಾಯಧೀಶರು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

- Advertisement -

Related news

error: Content is protected !!