Saturday, June 28, 2025
spot_imgspot_img
spot_imgspot_img

ಬಂಟ್ವಾಳ : ಬಸ್ಸು ಚಾಲಕನ ನಿರ್ಲಕ್ಷ್ಯ ಚಾಲನೆಯಿಂದ ಬಸ್ಸಿನಿಂದ ಹೊರಗೆಸೆಯಲ್ಪಟ್ಟು ಮಹಿಳೆ ಗಂಭೀರ

- Advertisement -
- Advertisement -

ಬಂಟ್ವಾಳ : ಖಾಸಗಿ ಬಸ್ಸು ಚಾಲಕನ ನಿರ್ಲಕ್ಷ್ಯ ಚಾಲನೆಯಿಂದ ಮಹಿಳೆಯೋರ್ವರು ಬಸ್ಸಿನಿಂದ ಹೊರಗೆಸೆಯಲ್ಪಟ್ಟು ಗಂಭೀರ ಗಾಯಗೊಂಡ ಘಟನೆ ಮಾಣಿಯಲ್ಲಿ ನಡೆದಿದೆ.

ಬಸ್ಸಿನಿಂದ ಹೊರಗೆಸೆಯಲ್ಪಟ್ಟು ಗಾಯಗೊಂಡ ಮಹಿಳೆಯನ್ನು ಉಪ್ಪಿನಂಗಡಿ ನಿವಾಸಿ ರಾಧಾ ಎಂದು ಗುರುತಿಲಾಗಿದೆ.

ಬಸ್ಸು ಚಾಲಕ ಅಬ್ದುಲ್ ಸಮದ್ ಎಂಬಾತನ ನಿರ್ಲಕ್ಷ್ಯದ ಚಾಲನೆ ಹಾಗೂ ನಿರ್ವಾಹಕ ರಾಧಾಕೃಷ್ಣ ಬಳ್ಳಾಲ್ ಅವರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗಿದ್ದು, ನಿರ್ಲಕ್ಷ್ಯದ ಚಾಲನೆಯಿಂದ ರಾಧಾ ಅವರು ಬಸ್ಸಿನಿಂದ ಮುಂಭಾಗದ ಬಾಗಿಲ ಮೂಲಕ ರಸ್ತೆಗೆಸೆಯಲ್ಪಟಿದ್ದಾರೆ. ಘಟನೆಯಿಂದ ಗಾಯಗೊಂಡ ಅವರನ್ನು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಗಾಯಾಳು ಮಹಿಳೆಯ ಪುತ್ರಿ ಎಂ ಸುನಿತಾ ಅವರು ನೀಡಿದ ದೂರಿನಂತೆ ಬಸ್ಸು ಚಾಲಕ ಅಬ್ದುಲ್ ಸಮದ್ ಹಾಗೂ ನಿರ್ವಾಹಕ ರಾಧಾಕೃಷ್ಣ ಬಳ್ಳಾಲ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!