ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ವಿಟ್ಲ ಘಟಕದ ತೃತೀಯ ವರ್ಷದ ವಾರ್ಷಿಕೋತ್ಸವ ದಿನಾಂಕ 1.5.2023 ರಂದು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಿತು.
ಖ್ಯಾತ ಯಕ್ಷಗಾನ ಭಾಗವತರಾಗಿರುವ ಪಟ್ಲ ಸತೀಶ್ ಶೆಟ್ಟಿಯವರು ಟ್ರಸ್ಟಿನ ಮೂಲಕ ಕಲಾಶ್ರಯದಾತರಾಗಿ, ಯಕ್ಷಗಾನ, ನಾಟಕ, ಕಲಾವಿದರಿಗೆ, ಸಹಾಯ ಹಸ್ತ ಚಾಚುವ ಮಹತ್ತರ ಕಲಾಪೋಷಣೆಯಿಂದ ಸಂತೃಪ್ತ ಭಾವವನ್ನು ಕಂಡು , ವಿದ್ಯಾರ್ಥಿವೇತನ, ಆರೋಗ್ಯವಿಮೆ, ಆಶ್ರಯಯೋಜನೆಗಳಂತಹ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾ, ಯಕ್ಷಧ್ರುವ ಪಟ್ಲ ಫೌಂಡೇಶನ್ ನ ವಿಟ್ಲ ಘಟಕದ ಕಾರ್ಯಕ್ರಮವನ್ನು ಪ್ರಶಂಸಿಸಿ, ಈ ಘಟಕದ ವತಿಯಿಂದ ಅಶಕ್ತ ಕಲಾವಿದರ ಪೋಷಣೆ ಆಗಲಿದೆಯೆಂದು ಭರವಸೆಯನ್ನಿತ್ತು ಶುಭಕೋರಿದರು.
ವೇದಿಕೆಯಲ್ಲಿ ಹಿರಿಯ ಯಕ್ಷಗಾನ ಕಲಾವಿದ, ಅರ್ಥದಾರಿ, ನಾಟಕ, ಚಲನಚಿತ್ರ ಕಲಾವಿದ ವಿಟ್ಲ ಮಂಗೇಶ್ ಭಟ್ ರವರನ್ನು ಕಲಾ ಗೌರವವನ್ನು ಇತ್ತು ಗೌರವಿಸಲಾಯಿತು. ಘಟಕದ ಹಿರಿಯ ಸಲಹೆಗಾರ ಮಾರಪ್ಪ ಶೆಟ್ಟಿ ಬೈಲುಗುತ್ತು ಹಾಗೂ ಸುಂದರಶೆಟ್ಟಿ ಚೆಂಬರಡ್ಕ, ಧಾರ್ಮಿಕ ಮುಖಂಡ ಕೃಷ್ಣಯ್ಯ ಕೆ ವಿಟ್ಲ ಅರಮನೆ, ಕಲಾವಿದ ವಿದೇಶಿ ಸಂಘಟಕ ಮೋಹನದಾಸ್ ರೈ ಎರುಂಬು, ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲ ಜಯರಾಮ ರೈ ಜತೆಗಿದ್ದು ಶುಭ ಹಾರೈಸಿದರು.