Sunday, June 29, 2025
spot_imgspot_img
spot_imgspot_img

ಎರುಂಬು :ವಿಷ್ಣುಮಂಗಲ ದೇವಸ್ಥಾನ ಅಖಂಡ ಭಜನಾ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ದಿನಾಂಕ 31.12.2020 ರ ಸೂರ್ಯೋದಯದಿಂದ 01.01.2021ರ ಸೂರ್ಯೋದಯದ ವರೆಗೆ 24ಗಂಟೆಗಳ ಅಖಂಡ ಭಜನಾ ಕಾರ್ಯಕ್ರಮವು ಮಡಿಯಾಳ ಗೋಪಾಲಕೃಷ್ಣ ದೇವಸ್ಥಾನದ ಅರ್ಚಕರಾದ ಶ್ರೀ ಗಣೇಶ ಮಯ್ಯ ರವರಿಂದ ದೀಪೋಜ್ವಲನೆಯೊಂದಿಗೆ ಆರಂಭಗೊಂಡಿತು.

ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸುಮಾರು 20 ವಿವಿಧ ಭಜನಾ ತಂಡಗಳು ಈ ಭಕ್ತಿ ಸಂಕೀರ್ತನೆಯಲ್ಲಿ ಭಾಗವಹಿಸಲಿರುವವು. ಕುಣಿತ ಭಜನಾ ತಂಡಗಳು ವಿಶೇಷ ಮೆರುಗು ನೀಡಲಿರುವವು. ಶ್ರೀ ವಿಷ್ಣುಮಂಗಲ ದೇವಸ್ಥಾನದ ಪ್ರಧಾನ ಅರ್ಚಕರಾದ ಬಾಲಕೃಷ್ಣ ಕಾರಂತರ ನಿರ್ದೇಶನದಲ್ಲಿ ನಡೆಯುವ ಈ ಕಾರ್ಯಕ್ರಮವು ವಿಟ್ಲ ಅರಮನೆಯ, ವಿಷ್ಣು ಮಂಗಲ ಸೇವಾ ಸಮಿತಿ, ದಿವ್ಯಜ್ಯೋತಿ ಮಿತ್ರ ವೃಂದ, ಸುಜ್ಞಾನ ಮಹಿಳಾ ಮಂಡಳಿ, ಊರ ಹತ್ತು ಸಮಸ್ತರ ಸಹಕಾರದಿಂದ ನಡೆಯಲಿರುವುದು. ವಿಶೇಷ ಅಲಂಕೃತ ದೇವಾಲಯವು ಭಗವಂತನ ನಾಮಸ್ಮರಣೆಗೆ ಯೋಗ್ಯವಾಗಿ, ಪ್ರಸ್ತುತ ಕೊರೊನ ಎಚ್ಚರಿಕೆ ವ್ಯವಸ್ಥೆ ಒಳಗೊಂಡು ನಡೆಸುತ್ತಿದೆ. ಸದ್ಭಕ್ತಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿ ಯಶಸ್ವಿಗೊಳಿಸಬೇಕೆಂದು ದೇವಳದ ಪರವಾಗಿ ವಿನಂತಿಸಲಾಗಿದೆ.

- Advertisement -

Related news

error: Content is protected !!