Saturday, June 28, 2025
spot_imgspot_img
spot_imgspot_img

ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆಗೈದ ಕಾಂಗ್ರೆಸ್‌ನ ನಾಯಕಿ

- Advertisement -
- Advertisement -

ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್‌ನ ನಾಯಕಿಯೊಬ್ಬರು ಮಹಿಳೆಯೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ತುಮಕೂರಿನ ಶ್ರೀರಾಮನಗರದಲ್ಲಿ ಘಟನೆ ನಡೆದಿದೆ. ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಮಾಜಿ ಉಪಾಧ್ಯಕ್ಷೆ ಸಾಹೇರಾ ಬಾನು ಹಲ್ಲೆ ಮಾಡಿದವರು ಎಂದು ಹೇಳಲಾಗಿದೆ.

ಶ್ರೀರಾಮನಗರದ ನಿವಾಸಿ ನಾಜೀಮಾ ಹಲ್ಲೆಗೊಳಗಾದ ಮಹಿಳೆ. ನಾಜೀಮಾಳ ತಲೆಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಿದ್ಯುತ್ ಕಂಬ ಅಳವಡಿಸುವ ವಿಚಾರದಲ್ಲಿ ಗಲಾಟೆ

ವಿದ್ಯುತ್ ಕಂಬ ಅಳವಡಿಸುವ ವಿಚಾರದಲ್ಲಿ ಸಾಹೇರಾ ಹಾಗೂ ನಾಜೀಮಾ ಕುಟುಂಬದ ನಡುವೆ ಗಲಾಟೆ ನಡೆದು ವಿಕೋಪಕ್ಕೆ ತಿರುಗಿದೆ. ಆಗ ಸಾಹೇರಾ ತನ್ನ ಪತಿ ಮುಜಿಬ್ ಜತೆ ಸೇರಿಕೊಂಡು ನಾಜೀಮಾ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ನಾಜೀಮಾ ತನ್ನನ್ನು ಬಿಡುವಂತೆ ಕೂಗಿಕೊಂಡರೂ ಬಿಡದೇ ಜುಟ್ಟು ಹಿಡಿದು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆಂದು ಆರೋಪ ಮಾಡಲಾಗಿದೆ. ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!