- Advertisement -
- Advertisement -


ಪುತ್ತೂರು: ಕುಂಬ್ರ ಕೃಷಿಪತ್ತಿನ ಸಹಕಾರಿ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ರಾಜೀವಿ ಎಸ್ ರೈಯವರು ಜ.31 ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.
ಒಳಮೊಗ್ರು ಗ್ರಾಮದ ಕುಂಬ್ರ ನಿವಾಸಿಯಾಗಿರುವ ಇವರು ಕುಂಬ್ರ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕಳೆದ 34 ವರ್ಷಗಳಿಂದ ಸೇವೆಯಲ್ಲಿದ್ದಾರೆ. 1988 ಜುಲೈ 1ರಂದು ಗುಮಾಸ್ತರಾಗಿ ಸೇವೆಗೆ ಸೇರಿದ ಇವರು ಶಾಖಾ ವ್ಯವಸ್ಥಾಪಕರಾಗಿ, ಲೆಕ್ಕಿಗರಾಗಿ, ಬಳಿಕ 2018 ಮಾರ್ಚ್ ತಿಂಗಳಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಭಡ್ತಿ ಹೊಂದಿದ್ದರು. ಇವರು ಜ. 31 ರಂದು ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ.
ಪತಿ ಶ್ರೀನಿವಾಸ್ ರೈ ಕಣ್ಣೂರುಗುತ್ತುರವರು ನಿವೃತ್ತ ಸೈನಿಕರಾಗಿದ್ದು, ಪುತ್ರ ಶಸ್ಮಿಥ್ ರೈ, ಬೆಂಗಳೂರಿನ ಎಸ್ಬಿ ಬ್ಯಾಂಕ್ನಲ್ಲಿ ಉದ್ಯೋಗದಲ್ಲಿದ್ದಾರೆ, ಪುತ್ರಿ ಸೃಜನಿ ಪಿ. ಶೆಟ್ಟಿ, ಅಳಿಯ ಕೆದಂಬಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹಾಗೂ ಮೊಮ್ಮಗ ರಿಧಾನ್ ಪಿ. ಶೆಟ್ಟಿಯವರನ್ನೊಳಗೊಂಡ ಸುಖೀ ಸಂಸಾರ ಇವರದ್ದಾಗಿದೆ.


- Advertisement -