- Advertisement -
- Advertisement -

ಪುತ್ತೂರು: ಫೆ.8 ರಿಂದ ಫೆ.11 ರವರೆಗೆ ಧರ್ಮ ದೈವಗಳ ನೇಮೋತ್ಸವವು ಸೂರಂಬೈಲ್ ಬಾರಿಕೆ ತರವಾಡು ಮನೆಯಲ್ಲಿ ನಡೆಯಲಿದೆ.
ಆ ಪ್ರಯುಕ್ತ ನಾಳೆ ಫೆ.10ರಂದು ಬೆಳಿಗ್ಗೆ 8 ರಿಂದ ಭಂಡಾರ ಇಳಿಯುವುದು, ಬೆಳಿಗ್ಗೆ 9ಕ್ಕೆ ಧರ್ಮದೈವ ಮೂಲಕರ್ತ ಶ್ರೀ ಮಲರಾಯಿ ದೈವದ ನೇಮ ಜರಗಲಿದೆ. ಮಧ್ಯಾಹ್ನ 1ಕ್ಕೆ ಸಿರಿಮುಡಿ ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಆ ಪ್ರಯುಕ್ತ ತಾವೆಲ್ಲರೂ ಕುಟುಂಬಸಮೇತರಾಗಿ ಆಗಮಿಸಿ, ಉತ್ಸವಾದಿಗಳಲ್ಲಿ ಭಾಗವಹಿಸಿ, ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಸೂರಂಬೈಲ್ ತರವಾಡಿನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


- Advertisement -