Sunday, June 29, 2025
spot_imgspot_img
spot_imgspot_img

ಬಂಟ್ವಾಳ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪೆರಾಜೆಯ ಶ್ರೀ ರಾಮಚಂದ್ರಾಪುರ ಮಠಕ್ಕೆ ಭೇಟಿ!

- Advertisement -
- Advertisement -

ಬಂಟ್ವಾಳ: ರಾಜ್ಯ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾಗಿ 18 ಬಾರಿ ಪೂರ್ತಿ ರಾಜ್ಯ ಹಾಗೂ ರಾಜ್ಯದ 311 ಮಂಡಲಗಳಲ್ಲಿ 300 ಮಂಡಲದ ಪ್ರವಾಸ ಮಾಡಿ ತನ್ನ ಅಧಿಕಾರದ ಅವಧಿಯ ಎಲ್ಲ ಚುನಾವಣೆಗಳಲ್ಲಿ ಸಂಘಟನಾತ್ಮಕ ಗೆಲುವು ಸಾಧಿಸಿ ಯಶಸ್ವಿ 2 ವರ್ಷ ಪೂರೈಸಿದ ನಳಿನ್ ಕುಮಾರ್ ಕಟೀಲ್ ರವರು ಈ ದಿನ ಖಾಸಗಿ ಕಾರ್ಯಕ್ರಮಕ್ಕಾಗಿ ಪೆರಾಜೆಯ ಶ್ರೀ ರಾಮಚಂದ್ರಾಪುರ ಮಠಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಹಿರಿಯರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕರವರು, ನಳಿನ್ ಕುಮಾರ್ ರವರನ್ನು ಶಾಲು ಹಾಕಿ ಗೌರವಿಸಿ ಆಶೀರ್ವಾದಿಸಿದರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಡಾ.ಕಮಲ ಪ್ರಭಾಕರ ಭಟ್, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಕ್ಷೇತ್ರ ಕಾರ್ಯದರ್ಶಿಗಳಾದ ಗಣೇಶ್ ರೈ ಮಾಣಿ, ಪುರುಷೋತ್ತಮ ಶೆಟ್ಟಿ, ಕೊಂಕೋಡಿ ಪದ್ಮನಾಭ ಭಟ್, ಪುಷ್ಪರಾಜ್ ಚೌಟ, ರಾಜಾರಾಮ ಭಟ್, ನಾರಾಯಣ ಶೆಟ್ಟಿ, ವಿನೀತ್ ಮುಂತಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!