Saturday, June 28, 2025
spot_imgspot_img
spot_imgspot_img

ಮಂಗಳೂರು: 15 ದಿನದ ಅಂತರದಲ್ಲಿ ಒಂದೇ ಮೇಳದ ಇಬ್ಬರು ಕಲಾವಿದರ ಅಕಾಲ ಮೃತ್ಯು; ಈ ಎರಡು ಸಾವು ತಾಯಿಗೆ ಯಕ್ಷಗಾನ ಸೇವೆ ಸಲ್ಲುತ್ತಿಲ್ಲ ಎಂಬ ಸೂಚನೆಯೇ..? ಸಾಮಾಜಿಕ ಜಾಲತಾಣದಲ್ಲಿ ಚರ್ಚೆ..!

- Advertisement -
- Advertisement -

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಮೇಳದ ಕಲಾವಿದ ಗುರುವಪ್ಪ ಬಾಯಾರು (58) ಅವರು ನಿನ್ನೆ ರಾತ್ರಿ ಕಟೀಲಿನ ಸರಸ್ವತೀ ಸದನದಲ್ಲಿ ನಡೆಯುತ್ತಿದ್ದ ಯಕ್ಷಗಾನದ ಸಂದರ್ಭ ರಂಗಸ್ಥಳದಲ್ಲೇ ಹೃದಯಾಘಾತದಿಂದ ನಿಧನ ಹೊಂದಿದರು. ಇವರ ಮರಣದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆಯೊಂದು ಶುರುವಾಗಿದೆ.

ಕಳೆದ ಕೆಲ ದಿನದ ಮೊದಲು ಚೌಕಿ ಕೆಲಸ ಮಾಡುತ್ತಿದ್ದ ಕಲಾವಿದರೊಬ್ಬರೂ ಇದೇ ರೀತಿ ಆಕಾಲ‌ ಮೃತ್ಯು ಹೊಂದಿದ್ದರು. ಇದು ಈಗ ಮತ್ತೊಂದು ಕಲಾವಿದ ಸಹ ಇದೇ ರೀತಿ ಅಕಾಲ ಮೃತ್ಯು ಹೊಂದಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಮೇಳದ ಆಡಳಿತ ಅವ್ಯವಸ್ಥೆಗೆ ಅಮಾಯಕ ಕಲಾವಿದರು ಬಲಿಯಾಗುತ್ತಿದ್ದಾರೆ. ಈ ಎರಡು ಸಾವು ತಾಯಿಗೆ ಯಕ್ಷಗಾನ ಸೇವೆ ಸಲ್ಲುತ್ತಿಲ್ಲ ಎಂಬ ಸೂಚನೆಯೇ..? ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

ಈ ವರ್ಷದಿಂದ ಕಟೀಲು ಮೇಳ ಕಾಲಮಿತಿಯ ಯಕ್ಷಗಾನ ಸೇವೆಯನ್ನು ನಡೆಸುತ್ತಾ ಬರುತ್ತಿದ್ದು, ತಾಯಿ ಎದುರು ಹೂ ತೆಗೆದಾಗ ಒಪಗಪ್ಪಿದ್ದಾಳೆ ಎಂದು ಹರಿನಾರಾಯಣ ಆಸ್ರಣ್ಣ ಹೇಳಿದ್ದರೆ. ಅವರ ಮಾರ್ಗದರ್ಶನದಂತೆ ಮೇಳ‌ ಮತ್ತು ಮೇಳದ ಯಜಮಾನ ವ್ಯವಹರಿಸುತ್ತಿದ್ದು, ಕಾಲಮಿತಿಯ ಯಕ್ಷಗಾನ ಸೈ ಎಂದಿದ್ದರು, ಆದರೆ, ಭಕ್ತಾಭಿಮಾನಿಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ ಇದಕ್ಕೆ ಅಸ್ರಣ್ಣ & ಟೀಂ ಕ್ಯಾರೇ ಎನ್ನದೇ ಸೇವೆ ಆರಂಭಿಸಿದರು.

ಸೇವೆಯ ಪ್ರಥಮ ದಿನವೇ ಮಳೆ ಬಂದು ಸೇವೆಗೆ ಅಡಚನೆಯಾಗಿತ್ತು ಹಿಂದೆಂದೂ ಇಂತಹ ಪರಿಸ್ಥಿತಿ ಬಂದಿರಲಿಲ್ಲ ಮತ್ತು ತಾಯಿ ಇದರಿಂದ ಸಂತುಷ್ಠಳಾಗಲಿಲ್ಲ ಎಂದು ಮೇಲ್ನೋಟಕ್ಕೆ ಅನ್ನಿಸುತ್ತಿದೆ ಎಂದು ಆ ದಿನವೇ ಚರ್ಚೆಗಳು ನಡೆಯುತ್ತಿತ್ತು. ಇದೀಗ 2 ಕಲಾವಿದರ ಅಕಾಲ ಮೃತ್ಯು ಮತ್ತಷ್ಟು ಪುಷ್ಠಿ ನೀಡುತ್ತಿದೆ. ತಾಯಿ ಭ್ರಾಮರಿ ಸೂಚನೆ ನೀಡುತ್ತಿದ್ದಾರೆಯೇ..!? ತನಗೆ ಯಕ್ಷಗಾನ ಸೇವೆ ಸಲ್ಲುತ್ತಿಲ್ಲ ಎಂಬ ಮುನ್ಸೂಚನೆಯೇ ಈ ಅಪಶಕುನಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದ್ದು, ಇದಕ್ಕೆಲ್ಲಾ ಮೇಳದ ಆಡಳಿತ ಮಂಡಳಿ ಉತ್ತರಿಸಬೇಕಾಗಿದೆ. ಎರಡು ಕಲಾವಿದರ ಮನೆ ಮತ್ತು ಕುಟುಂಬ ಯಕ್ಷಗಾನ ಮೇಳವನ್ನೇ ಅವಲಂಭಿಸಿತ್ತು, ಇದೀಗ ಅವರ ಮನೆಗೆ ಪರಿಹಾರ ನೀಡುವ ಬಗ್ಗೆ ಮೇಳದ ಆಡಳಿತ ಮಂಡಳಿಯು ಮೌನ ವಹಿಸಿದಂತಿದೆ ಎಂದು ಯಕ್ಷಗಾನ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!