Saturday, June 28, 2025
spot_imgspot_img
spot_imgspot_img

ಮಂಗಳೂರು: ಉರೂಸ್ ಆಚರಣೆಗೆ ಸಿದ್ದರಾಮಯ್ಯ ಉಳ್ಳಾಲ ದರ್ಗಾಕ್ಕೆ ಭೇಟಿ; ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತ

- Advertisement -
- Advertisement -

ಮಂಗಳೂರು : ಉರೂಸ್ ಆಚರಣೆಯ ಸಂದರ್ಭದಲ್ಲಿ ಸಯ್ಯದ್ ಮದನಿ ಉಳ್ಳಾಲ ದರ್ಗಾಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಇವರ ಪೋಟೋ ವೈರಲ್ ಆಗುತ್ತಿದಂತೆ ಸಾಮಾಜಿಕ ಜಾಲತಾಣದಲ್ಲಿ ಜನರು ಆಕ್ರೋಶ ವ್ತಕ್ತ ಪಡಿಸಿದ್ದಾರೆ.

ಕೇಸರಿ ಶಾಲು ಕಂಡ್ರೆ ಉರಿದು ಬೀಳೋ ಸಿದ್ದರಾಮಯ್ಯನವರು ಇವತ್ತು ಟೋಪಿ ಹಾಕಿ ಮಂಗಳೂರಲ್ಲಿ ಭಾಷಣ ಬೀಗಿದದ್ದು ಹೀಗೆ.. ಇನ್ನಾದರು ರಾಜಕೀಯ ಬಿಟ್ಟು ಹಿಂದೂಗಳು ಇವರ ಬಣ್ಣವನ್ನು ಅರ್ಥ ಮಾಡ್ಕೋಳಿ ಎನ್ನುವ ಪೋಸ್ಟರ್ ಒಂದು ವೈರಲ್ ಆಗಿದೆ.

ಉಳ್ಳಾಲದಲ್ಲಿ ಸಿದ್ಮುಲ್ಲಾ ಖಾನ್ ಇವರು ಇಸ್ಲಾಂ ಧರ್ಮಕ್ಕೆ ಮತಾಂತರ ಗೊಂಡರು ಎನ್ನುವ ಮೂಲಕ ಆಕ್ರೋಶ ವ್ತಕ್ತವಾಗಿದೆ.

ಸಿದ್ದರಾಮಯ್ಯನವರು ದರ್ಗಾಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು. ಈ ವೇಳೆ ಮಂಗಳೂರು ಶಾಸಕ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್, ಮಾಜಿ ಶಾಸಕರಾದ ಜೆ.ಆರ್.ಲೋಬೋ, ಮೊಯ್ದೀನ್ ಬಾವ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.

ಬಿಜೆಪಿ ಆಡಳಿತದಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದರೂ ರಾಜ್ಯ ದಿವಾಳಿಯಾಗುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ನಾವು ಐದು ವರ್ಷಗಳ ಕಾಲ ಆಡಳಿತ ನಡೆಸಿದೆವು; ಆದರೆ ಯಾವುದೇ ಸಚಿವರ ವಿರುದ್ಧ ಯಾವುದೇ ವೈಯಕ್ತಿಕ ಭ್ರಷ್ಟಾಚಾರದ ಆರೋಪ ಇರಲಿಲ್ಲ. ಆದರೆ, ಪ್ರಸ್ತುತ ಆಡಳಿತದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ, ಗುತ್ತಿಗೆದಾರರ ಸಂಘವೇ ಪ್ರತಿ ಯೋಜನೆಯಲ್ಲಿ 40% ಕಿಕ್‌ಬ್ಯಾಕ್ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

- Advertisement -

Related news

error: Content is protected !!