- Advertisement -
- Advertisement -



ವಿಟ್ಲ : ಕಳೆದ ಹತ್ತು ತಿಂಗಳ ಹಿಂದೆ ಆರಂಭವಾಗಿ, ಒಂದಲ್ಲ ಒಂದು ಕಾರ್ಯಚಟುವಟಿಕೆಯ ಮೂಲಕ ಅನೇಕ ಕಲಾಭಿಮಾನಿಗಳ ಮನಸ್ಸನ್ನು ಗೆಲ್ಲಲು ಯಶಸ್ವಿಯಾಗಿರುವ “ಕಲಾ ತಪಸ್ವಿ ಸಾಂಸ್ಕೃತಿಕ ತಂಡ “ಇದೀಗ ತನ್ನ ಹೊಸ ಯೋಜನೆಯನ್ನು ಇಟ್ಟುಕೊಂಡಿದೆ. ಅದೇ “ಕಲಾತಪಸ್ವಿ ಕೋಚಿಂಗ್ ಸೆಂಟರ್”. ಇದರ ಉದ್ಘಾಟನಾ ಸಮಾರಂಭವು ಎ.02 ರಂದು ಕಂಬಳಬೆಟ್ಟು -ಕಾರ್ಯಡಿಯಲ್ಲಿರುವ ಜನಪ್ರಸಿದ್ಧ ಕಟ್ಟಡದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ರಾಮ್ ಭಟ್ ನೀರಪಳಿಕೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೋಪಾಲ ಸೂರ್ಯ, ರಾಮದಾಸ್ ಶೆಟ್ಟಿ ಪಾತ್ರತೋಟ, ತಾರಾನಾಥ್ ಬೋಳಿಗದ್ದೆ ಭಾಗವಹಿಸಿದ್ದರು. ಅತಿಥಿಗಳು ದೀಪವನ್ನು ಬೆಳಗಿಸಿ, ಭಾರತ ಮಾತೆಗೆ ಪುಷ್ಪಾರ್ಚನೆಗೈದು, ಬಿಳಿಹಳಗೆಯಲ್ಲಿ ಓಂಕಾರ ಬರೆಯುವ ಮೂಲಕ ಕೋಚಿಂಗ್ ಸೆಂಟರ್ ಉದ್ಘಾಟಿಸಿದರು. ಜಶಿನ್ ಕಾರ್ಯಡಿ ದೇಶಭಕ್ತಿಗೀತೆ ಹಾಡಿದರು. ಕಲಾತಪಸ್ವಿ ತಂಡದ ನಿರ್ದೇಶಕ ಜೈದೀಪ್ ಅಮೈ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.
- Advertisement -