Monday, June 30, 2025
spot_imgspot_img
spot_imgspot_img

ವಿಟ್ಲ : ಕುಸಿಯುವ ಭೀತಿಯಲ್ಲಿ ಕಲ್ಲಮಜಲು ಸೇತುವೆ

- Advertisement -
- Advertisement -


ವಿಟ್ಲ: ಕೊಳ್ನಾಡು ಗ್ರಾಮದ ಕಲ್ಲಮಜಲು ಸೇತುವೆಯ ತಡೆಗೋಡೆ ಭಾರೀ ಮಳೆಯ ಕಾರಣದಿಂದಾಗಿ ಕುಸಿದು ಹೊಳೆಯ ಪಾಲಾಗಿದ್ದು ಇದರಿಂದಾಗಿ ಸೇತುವೆ ಅಪಾಯದ ಸ್ಥಿತಿಗೆ ತಲುಪಿದೆ.


ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಲ್ಲಮಜಲು ಸೇತುವೆಯ ಬಲಭಾಗದಲ್ಲಿರುವ ಸುಮಾರು 25ಅಡಿಯಷ್ಟು ಉದ್ದದ ತಡೆಗೋಡೆ ಹೊಳೆಯ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ. ಸೇತುವೆಯ ಬುಡ ತಲುಪಲು ಕೇವಲ ಹತ್ತು ಅಡಿಗಳಷ್ಟು ಬಾಕಿ ಉಳಿದಿದ್ದು ಈ ಬಾರಿಯ ಮಳೆಗಾಲ ಮುಗಿಯುವ ಮುನ್ನ ಸೇತುವೆಗೆ ಭಾರೀ ಅಪಾಯ ಎದುರಾಗಲಿದೆ.

ಸೆರ್ಕಳ, ಪೀಲ್ಯಡ್ಕ, ಕುಲ್ಯಾರು, ತೋಡ್ಲ, ನಾರ್ಶ ಸುತ್ತಮುತ್ತಲ 2ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ವಿಟ್ಲ ಅಥವಾ ಸಾಲೆತ್ತೂರನ್ನು ಸಂಪರ್ಕಿಸಲು ಕಲ್ಲಮಜಲು ಸೇತುವೆ ಏಕೈಕ ಆಧಾರಸ್ತಂಭವಾಗಿದೆ. ಅಲ್ಲದೇ ಕುಡ್ತಮುಗೇರು, ಕರಾಯಿ ಮೂಲಕ ಕಲ್ಲಡ್ಕ ಸಂಪರ್ಕಿಸಲು ಇದೇ ಸೇತುವೆ ಮುಖ್ಯವಾಗಿದ್ದು ತಕ್ಷಣವೇ ಸಂಬಂಧಿಸಿದ ಇಲಾಖೆ ಎಚ್ಚೆತ್ತುಕೊಳ್ಳುವ ಮೂಲಕ ಮತ್ತಷ್ಟು ತಡೆಗೋಡೆ ಕುಸಿಯುವುದನ್ನು ತಡೆಹಿಡಿಯಬೇಕಾಗಿದೆ.

- Advertisement -

Related news

error: Content is protected !!