Saturday, June 28, 2025
spot_imgspot_img
spot_imgspot_img

ವಿಟ್ಲ: ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಿದ ಎನ್.ಸಿ.ಸಿ ಘಟಕದ ವಿದ್ಯಾರ್ಥಿಗಳು

- Advertisement -
- Advertisement -

ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ಬದನಾಜೆ ಎಂಬಲ್ಲಿ ತೀರಾ ಮಳೆಯಿಂದ ರಸ್ತೆಗೆ ಬಿದ್ದ ಮರವು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿತ್ತು.

ಇದು ವಿಟ್ಲ ಪಂಚಾಯತ್ ವ್ಯಾಪ್ತಿಯಾಗಿದ್ದು ಪಂಚಾಯತ್ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ ಪುತ್ತೂರು ವಿವೇಕಾನಂದ ಕಾಲೇಜಿನ ಲೆಫ್ಟಿನೆಂಟ್ ಭಾಮಿ ಅತುಲ್ ಶೆಣೈ ಇವರ ನೇತೃತ್ವದ ಎನ್.ಸಿ.ಸಿ ಘಟಕದ ವಿದ್ಯಾರ್ಥಿಗಳಾದ ವಿಟ್ಲ ಕಸಬಾ ಗ್ರಾಮದ ರಾಮಣ್ಣ ಗೌಡ ಮುದೂರು ಹಾಗೂ ಜಯಾ ಇವರ ಪುತ್ರನಾದ ದೀಕ್ಷಿತ್ ಆರ್.ಎಮ್ ಹಾಗೂ ವಿಟ್ಲ ಮುಡ್ನೂರು ಗ್ರಾಮದ ಚಂದ್ರಶೇಖರ ಗೌಡ ಹಾಗೂ ಹರಿಣಾಕ್ಷಿ ಇವರ ಪುತ್ರಿಯಾದ ತನುಷಾ ಸಿ.ಕೆ ಇವರು ಸಾರ್ವಜನಿಕರ ತೊಂದರೆಯನ್ನು ಅರಿತು ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಸಂಚಾರಕ್ಕೆ ಅಡೆತಡೆಯಾಗುತ್ತಿದ್ದ ಮರವನ್ನು ತೆರವುಗೊಳಿಸಿ ಇತರರಿಗೆ ಮಾದರಿಯಾಗಿದ್ದಾರೆ.

vtv vitla
- Advertisement -

Related news

error: Content is protected !!