Monday, June 30, 2025
spot_imgspot_img
spot_imgspot_img

ಅಣುಕು ಪ್ರದರ್ಶನದ ವೇಳೆ ನಡೆದೇ ಹೋಯ್ತು ದುರಂತ; ನೀರಲ್ಲಿ ಮುಳುಗಿ ಯುವಕ ಮೃತ್ಯು

- Advertisement -
- Advertisement -

ಪ್ರವಾಹದ ವೇಳೆ ಯಾವ ರೀತಿಯಾಗಿ ಕಾರ್ಯನಿರ್ವಹಿಸಬೇಕೆನ್ನುವ ಅಣಕು ಕಾರ್ಯಚರಣೆ ವೇಳೆ ಯುವಕನೋರ್ವ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ವೆನ್ನಿಕುಲಂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಣುಕು ಕಾರ್ಯಚರಣೆ ವೇಳೆ ಘಟನೆ ನಡೆದಿದೆ. ಕಲ್ಲುಪಾರ ಪಾಲತಿಂಕಲ್ ನಿವಾಸಿ ಕಾಕರಕುನ್ನೆಲ್ ಬಿನು ಸೋಮನ್ (34) ಮೃತರು.

ಮಲ್ಲಪಲ್ಲಿ ತಾಲೂಕಿನ ಕೋಮಲಂ ಸೇತುವೆ ಬಳಿ ಈ ಘಟನೆ ನಡೆದಿದೆ. ಬಿನು ಅವರು ರಕ್ಷಣಾ ಸ್ವಯಂ ಸೇವಕರಾಗಿದ್ದಾರೆ. ಅಣುಕು ಕಾರ್ಯಚರಣೆ ವೇಳೆ ದೈಹಿಕ ಅಸ್ವಸ್ಥತೆಗೆ ಒಳಗಾಗಿ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ಮುಳುಗಿದ ಯುವಕನನ್ನು ಅಗ್ನಿಶಾಮಕ ರಕ್ಷಣಾ ದಳದ ಸ್ಕ್ರಬ್ ತಂಡವು ದಡಕ್ಕೆ ಕರೆದೊಯ್ದು ತಿರುವಲ್ಲಾದ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿನು ಸೋಮನ್‌ ಸಾವನ್ನಪ್ಪಿದ್ದಾರೆ.

- Advertisement -

Related news

error: Content is protected !!