Saturday, June 28, 2025
spot_imgspot_img
spot_imgspot_img

ಅಳಿಕೆ : (ಸೆ .6) ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ದಾರ ಪ್ರಯುಕ್ತ ಗರ್ಭಗುಡಿ ಮತ್ತು ನಮಸ್ಕಾರ ಮಂಟಪದ ಶಿಲಾಮಯ ಕೆಲಸಕಾರ್ಯಗಳ ಆರಂಭಕ್ಕೆ ತಾಂಬೂಲ ಕೊಡುವ ಕಾರ್ಯಕ್ರಮ

- Advertisement -
- Advertisement -

ಅಳಿಕೆ : ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ದಾರ ಸಂಬಂಧವಾಗಿ ವಾಸ್ತುಶಿಲ್ಪಿ ಶ್ರೀ ಕೃಷ್ಣಪ್ರಸಾದ ಮುನಿಯಂಗಳ ಇವರ ಮಾರ್ಗದರ್ಶನದಲ್ಲಿ ಗರ್ಭಗುಡಿ ಮತ್ತು ನಮಸ್ಕಾರ ಮಂಟಪದ ಶಿಲಾಮಯ ಕೆಲಸಕಾರ್ಯಗಳ ಆರಂಭಕ್ಕೆ ಬ್ರಹ್ಮಶ್ರೀ ಕುಂಟುಕುಡೇಲು ಶ್ರೀ ರಘುರಾಮ ತಂತ್ರಿವರ್ಯರಿಂದ ಶಿಲ್ಪಿ ಶ್ರೀ ಜಗದೀಶ್, ‘ಮಂಜುಶ್ರೀ ಕನ್‌ಸ್ಟ್ರಕ್ಷನ್ಸ್’, ಕುಕ್ಕುಂದೂರು, ಕಾರ್ಕಳ ಇವರಿಗೆ ತಾಂಬೂಲ ಕೊಡುವ ಕಾರ್ಯಕ್ರಮವು ತಾ. 6-9-2024ನೇ ಶುಕ್ರವಾರದಂದು ಕ್ಷೇತ್ರದಲ್ಲಿ ನಡೆಯಲಿದೆ.

ಕೆ. ಎಸ್. ಕೃಷ್ಣ ಭಟ್, ಗೌರವಾಧ್ಯಕ್ಷರು, ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಂ. ಪದ್ಮನಾಭ ಪೈ, ರಾಜ್ಯಾಧ್ಯಕ್ಷರು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು, ಕರ್ನಾಟಕ ರಾಜ್ಯ. ಮಹೇಶ ಮಡಿಯಾಲ, ಗೌರವಾಧ್ಯಕ್ಷರು, ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿ , ಸತೀಶ್ ಆಳ್ವ, ಇರಾ ಬಾಳಿಕೆ ವಿಟ್ಲ, ಆರ್ಥಿಕ ಸಮಿತಿ ಸಂಚಾಲಕರು, ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿ , ಸುಭಾಶ್‌ಚಂದ್ರ ನಾಯಕ್, ಉದ್ಯಮಿಗಳು ವಿಟ್ಲ, ಈಶ್ವರ ಭಟ್ ನಗ್ರಿಮೂಲೆ, ನ್ಯಾಯವಾದಿಗಳು ಭಾಗವಹಿಸಲಿದ್ದಾರೆ.

ಮಧ್ಯಾಹ್ನ ಗಂಟೆ 12.00ಕ್ಕೆ ಕಾರ್ತಿಕ ಪೂಜೆ , ಮಹಾಮಂಗಳಾರತಿ ನಂತರ ಪ್ರಸಾದ ಭೋಜನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!