Sunday, June 29, 2025
spot_imgspot_img
spot_imgspot_img

ಉಡುಪಿ: ಕಪ್ಪೆ ಚಿಪ್ಪು ಹೆಕ್ಕಲು ಹೋದಾಗ ದುರಂತ; ದೋಣಿ ಮಗುಚಿ ಮೂವರು ಮೃತ್ಯು – ಮತ್ತೋರ್ವ ನಾಪತ್ತೆ

- Advertisement -
- Advertisement -
vtv vitla

ಉಡುಪಿ: ಕಪ್ಪೆ ಚಿಪ್ಪು ಹೆಕ್ಕಲು ಹೋಗಿ ನಾಲ್ವರು ನೀರುಪಾಲಾದ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ಈ ಪೈಕಿ ಮೂವರು ಮೃತಪಟ್ಟಿದ್ದಾಗಿ ತಿಳಿದುಬಂದಿದೆ. ಇಬಾಜ್, ಫಜಾನ್, ಸೂಫಾನ್ ಫರ್ಹಾನ್‌ ಮೃತಪಟ್ಟಿದ್ದಾರೆ. ಮತ್ತೊಬ್ಬ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ರಂಜಾನ್‌ ಹಬ್ಬಕ್ಕೆಂದು ಬ್ರಹ್ಮಾವರದಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸಿದ್ದ ಏಳು ಯುವಕರು, ಕುಕ್ಕುಡೆ ಕಿಣಿಯರ ಕುದ್ರು ಸಮೀಪದ ನದಿಯಲ್ಲಿ ಚಿಪ್ಪು ಮೀನು ಹಿಡಿಯಲು ತೆರಳಿದ್ದರು. ದೋಣಿಯ ಮೂಲಕ ಮೀನು ಹಿಡಿಯಲು ಯತ್ನಿಸುತ್ತಿದ್ದರು. ಆದರೆ, ಸಂಜೆಯಾಗುತ್ತಲೇ ನೀರಿನ ಮಟ್ಟ ಏರಿಕೆಯಾಗಿ, ದೋಣಿ ಮಗುಚಿರಬಹುದು ಎಂದು ತಿಳಿದುಬಂದಿದೆ.

ನೀರಿನ ರಭಸದ ಮಧ್ಯೆಯೂ ಮೂವರು ಅಪಾಯದಿಂದ ಪಾರಾಗಿದ್ದಾರೆ. ಮೂವರು ಮೃತಪಟ್ಟಿರುವುದು ದೃಢಪಟ್ಟಿದ್ದು, ಇನ್ನೊಬ್ಬನಿಗಾಗಿ ತೀವ್ರ ಶೋಧ ನಡೆಯುತ್ತಿದೆ.

- Advertisement -

Related news

error: Content is protected !!