

ಉಡುಪಿ: ಅಶ್ವತ್ಥ ಎಲೆಯಲ್ಲಿ ಪ್ರಸಿದ್ಧ ವ್ಯಕ್ತಿಗಳ ಚಿತ್ರವನ್ನು ಮೂಡಿಸುವ ಉಡುಪಿಯ ಯುವ ಕಲಾವಿದ ಮಹೇಶ್ ಮರ್ಣೆ ರಚಿಸಿದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರಕ್ಕೆ ಸ್ವತಃ ಕ್ರಿಕೆಟ್ ದೇವರೆಂದೇ ಖ್ಯಾತರಾದ ಸಚಿನ್ ತೆಂಡೂಲ್ಕರ್ ಅವರು ಮೆಚ್ಚಿ ಅಭಿನಂದಿಸಿದ್ದಾರೆ.

ಉಡುಪಿಯ ಮರ್ಣೆ ಎಂಬ ಪುಟ್ಟ ಊರಿನ ಕಲಾವಿದರಾಗಿರುವ ಮಹೇಶ್ ಈಗಾಗಲೇ ಹಲವಾರು ಖ್ಯಾತ ವ್ಯಕ್ತಿಗಳ ಭಾವಚಿತ್ರಗಳನ್ನು ಅಶ್ವತ್ಥ ಎಲೆಯಲ್ಲಿ ಬಿಡಿಸುವ ಮೂಲಕ ಖ್ಯಾತರಾಗಿದ್ದಾರೆ. ಸುಮಾರು ಆರು ತಿಂಗಳ ಹಿಂದೆ ಮಹೇಶ್ ಅವರು ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರವನ್ನು ಅಶ್ವತ್ಥ ಎಲೆಯಲ್ಲಿ ಚಿತ್ರಿಸಿದ್ದರು. ಕೇವಲ ಏಳು ನಿಮಿಷಗಳಲ್ಲಿ ಈ ಚಿತ್ರವನ್ನು ಬಿಡಿಸಿ ಅತಿ ವೇಗವಾಗಿ ಭಾವಚಿತ್ರವನ್ನು ಬಿಡಿಸಿ ಎಕ್ಸ್ಕ್ಲೂಸಿವ್ ವರ್ಲ್ಡ್ ರೆಕಾರ್ಡ್ಸ್ ಸರ್ಟಿಫಿಕೇಟ್ ಅನ್ನು ಪಡೆದುಕೊಂಡಿದ್ದರು.

ಅಶ್ವತ್ಥ ಎಲೆಯಲ್ಲಿ ಬಿಡಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರವನ್ನು ಮಹೇಶ್ ಮರ್ಣೆ ಸಚಿನ್ ಅವರಿಗೆ ಕಳುಹಿಸಿಕೊಟ್ಟಿದ್ದರು. ಮಹೇಶ್ ಅವರ ಕಲಾ ಚಾರ್ತುರ್ಯವನ್ನು ಮೆಚ್ಚಿ ಸ್ವತಃ ಸಚಿನ್ ತೆಂಡೂಲ್ಕರ್ ಅವರೇ ಪ್ರಶಂಸನಾ ಪತ್ರದ ಜೊತೆಗೆ ತಮ್ಮ ಅಚ್ಚುಮೆಚ್ಚಿನ ಎರಡು ಫೊಟೋಗಳನ್ನು ಮಹೇಶ್ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.
“2021 ಮಾರ್ಚ್ ನಲ್ಲಿ ಅಶ್ವತ್ಥ ಎಲೆಯಲ್ಲಿ7 ನಿಮಿಷದಲ್ಲಿ ರಚಿಸಿದ್ದ ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರವು ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಗೆ ಆಯ್ಕೆಯಾಗಿತ್ತು. ಸಚಿನ್ ತೆಂಡೂಲ್ಕರ್ ಅವರ ಇನ್ನೊಂದು ಭಾವಚಿತ್ರವನ್ನು ರಚಿಸಿ ಅವರ ವಿಳಾಸಕ್ಕೆ ಕಳುಹಿಸಿದ್ದೆ. ಇದೀಗ ಆರು ತಿಂಗಳ ಬಳಿಕ ಅವರ ಪ್ರತಿಕ್ರಿಯೆ ಬಂದಿದೆ. ತುಂಬಾ ಖುಷಿ ಯಾಗಿದೆ” ಎಂದು ಕಲಾವಿದ ಮಹೇಶ್ ಮರ್ಣೆ ಪ್ರತಿಕ್ರಿಯಿಸಿದ್ದಾರೆ.
- ವೃದ್ಧಾಶ್ರಮದಲ್ಲಿ ಬಂಧಿಯಾಗಿದ್ದ 39 ವೃದ್ಧರ ರಕ್ಷಣೆ..!
- ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯತ್ವ ಪಡೆದು ಅಧ್ಯಕ್ಷ ಸ್ಥಾನ ಅಲಂಕರಿಸಿದ ಹರೀಶ್ ಇಂಜಾಡಿಯವರ ಭವಿಷ್ಯ ನಿರ್ಧಾರ..! ಜುಲೈ 3 ರಂದು ಹೈಕೋರ್ಟ್ನಲ್ಲಿ ತೀರ್ಪು …?
- ಧರ್ಮಸ್ಥಳ, ಸೌತಡ್ಕ ಕ್ಷೇತ್ರಕ್ಕೆ ರಾಜಸ್ಥಾನ ಹೈಕೋರ್ಟ್ ನ್ಯಾಯಮೂರ್ತಿ ಮುಖೇಶ್ ರಾಜ್ ಪುರೋಹಿತ್ ಭೇಟಿ
- ಮಂಗಳೂರು: ಮಕ್ಕಳ ಕಳ್ಳ ಸಾಗಾಟ ಪ್ರಕರಣ; ಮೂವರು ಆರೋಪಿಗಳಿಗೆ ಶಿಕ್ಷೆ ಘೋಷಣೆ
- ಶುಕ್ರವಾರ (ಇಂದು) ಮುಹರ್ರಮ್ ತಿಂಗಳು ಪ್ರಾರಂಭ- ಖಾಝಿ ಶೈಖುನಾ ಮಾಣಿ ಉಸ್ತಾದ್ ಘೋಷಣೆ

