Tuesday, July 1, 2025
spot_imgspot_img
spot_imgspot_img

ಕಾಸರಗೋಡು: ವಿದ್ಯುತ್ ಶಾಕ್ ತಗುಲಿ ಅಸುನೀಗಿದ ಬಾಲಕ!

- Advertisement -
- Advertisement -

ಕಾಸರಗೋಡು: ಇಲ್ಲಿನ ವರ್ಕಾಡಿ ಸಮೀಪದ ಮೊರತ್ತನೆಯಲ್ಲಿ ವಿದ್ಯುತ್ ಶಾಕ್ ತಗುಲಿ ಎಂಟು ವರ್ಷದ ಬಾಲಕ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

ಮೃತ ಬಾಲಕ ಮೊರತ್ತನೆಯ ಆಟೋ ರಿಕ್ಷಾ ಚಾಲಕ ಸದಾಶಿವ ಶೆಟ್ಟಿ ರವರ ಪುತ್ರ ಮೋಕ್ಷಿತ್ ರಾಜ್ ಶೆಟ್ಟಿ(8) ಎನ್ನಲಾಗಿದೆ . ಈತ ತಲೆಕ್ಕಲ ಎಲ್.ಪಿ ಶಾಲೆಯ ವಿದ್ಯಾರ್ಥಿಯಾಗಿದ್ದನು.

ಮಂಗಳವಾರ ಸಂಜೆ ಬಾಲಕ ಮನೆ ಸಮೀಪ ನಿರ್ಮಾಣ ಹಂತದಲ್ಲಿರುವ ಇನ್ನೊಂದು ಮನೆಯ ಮೇಲ್ಭಾಗಕ್ಕೆ ತೆರಳಿದ್ದ ಸಂದರ್ಭ ಮನೆಯ ಮೇಲ್ಭಾಗದಲ್ಲಿ ಹಾದು ಹೋಗುತ್ತಿದ್ದ ವಿದ್ಯುತ್ ಲೈನ್ ತಾಗಿ ಈ ದುರಂತ ನಡೆದಿದೆ.

ಸಂಜೆ ಐದು ಗಂಟೆ ಸುಮಾರಿಗೆ ಮನೆಯಿಂದ ಆಟವಾಡಲು ಹೊರ ಹೋಗಿದ್ದ ಬಾಲಕ ತಡವಾದರೂ ಮನೆಗೆ ಬಾರದಿದ್ದುದರಿಂದ ಮನೆಯವರು ಶೋಧ ನಡೆಸಿದಾಗ ನಿರ್ಮಾಣ ಹಂತದ ಮನೆಯ ಟೆರೇಸ್ ನಲ್ಲಿ ವಿದ್ಯುತ್ ಶಾಕ್ ತಗುಲಿ ಬಿದ್ದಿರುವುದು ಕಂಡುಬಂದಿದೆ. ಮೃತ ದೇಹವನ್ನು ಮಂಗಲ್ಪಾಡಿಯಲ್ಲಿರುವ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

- Advertisement -

Related news

error: Content is protected !!