ಕೊಳ್ನಾಡು ಗ್ರಾಮದ ನಾರ್ಶ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ವಾಲಿಬಾಲ್ ಪಂದ್ಯಕೂಟದಲ್ಲಿ ಬಾಲಕರ ವಿಭಾಗದಲ್ಲಿ ಪುಣ್ಯಕೋಟಿ ಪ್ರೌಡಶಾಲೆ ಕೈರಂಗಳ ಬಾಲಕಿಯರ ವಿಭಾಗದಲ್ಲಿ ಸರಕಾರಿ ಪ್ರೌಡಶಾಲೆ ನಾರ್ಶ ಮೈದಾನದ ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ದ್ವೀತಿಯ ಸ್ಥಾನವನ್ನು ಬಾಲಕರ ವಿಭಾಗದಲ್ಲಿ ಜ್ಞಾನದೀಪ ಪ್ರೌಡಶಾಲೆ ಮುಡಿಪು,ಬಾಲಕಿಯರ ವಿಭಾಗದಲ್ಲಿ ಸರಕಾರಿ ಪ್ರೌಡಶಾಲೆ ಕಾಡುಮಠ ಪಡೆದುಕೊಂಡಿತು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ ಮತ್ತು ಸರ್ಕಾರಿ ಪ್ರೌಡಶಾಲೆ ನಾರ್ಶಮೈದಾನ ಇದರ ಆಶ್ರಯದಲ್ಲಿ ನಡೆದ 17 ವಯೋಮಾನದ ಬಾಲಕ- ಬಾಲಕಿಯರ ವಾಲಿಬಾಲ್ ಪಂದ್ಯಾಕೂಟವು ಬಹಳ ಯಶಸ್ವಿಯಾಗಿ ನಡೆಯಿತು.


ಪಂದ್ಯಾಕೂಟವನ್ನು ಶಾಲಾ ಗೌರವಾದ್ಯಕ್ಷರಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಉದ್ಯಮಿ ಎನ್.ಸುಲೈಮಾನ್ ಹಾಜಿ ಸಿಂಗಾರಿ ಅವರು ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಮಾಜಿ ಅದ್ಯಕ್ಷರಾದ ಬಾಲಕೃಷ್ಣ ಸೆರ್ಕಳ,ಪ್ರಾಥಮಿಕ ಶಾಲೆ ತಾಳಿತ್ತನೂಜಿಯ ಶಶಿಕಾಂತ್ ಸುರಿಬೈಲ್ ಶಾಲೆಯ ಶಿವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.ಮಂಚಿ ವಲಯ ಮಟ್ಟದ ಪ್ರೌಢಶಾಲಾ ಬಾಲಕರ 18 ತಂಡಗಳು ಬಾಲಕಿಯರ ವಿಭಾಗದಲ್ಲಿ 6 ತಂಡಗಳು ಸೇರಿ ಒಟ್ಟು 24 ತಂಡಗಳು ಭಾಗವಹಿಸಿದ್ದವು.


ಎಲ್ಲಾ ಪಂದ್ಯಾಟಗಳು ರೋಚಕವಾಗಿ ಸಾಗಿದ್ದಲ್ಲದೆ ಪ್ರಬಲ ಪೈಪೋಟಿಯೊಂದಿಗೆ ಸೆಣಸಾಟ ನಡೆಸಿತ್ತು. ಸೆಮಿಫೈನಲ್ಸ್ ಪಂದ್ಯಾಟವು ಬಾರಿ ರೋಮಾಂಚನಕ್ಕೆ ಸಾಕ್ಷಿಯಾಯಿತು.ಬಾಲಕರ ವಿಭಾಗದಲ್ಲಿ ಪುಣ್ಯಕೋಟಿ ಕೈರಂಗಳ ತಂಡವು ಜ್ಞಾನದೀಪ ಮುಡಿಪು ತಂಡವನ್ನು ಸೋಲಿಸುವುದರೊಂದಿಗೆ ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿದೆ.ಬಾಲಕರ ವಿಭಾಗದಲ್ಲಿ ಸರ್ವಾಂಗೀಣ ಆಟಗಾರರಾಗಿ ಪ್ರಣೀತ್,ಚೇತನ್ ,ಮುಬೀನ್ ಬಾಲಕೀಯರ ವಿಭಾಗದಲ್ಲಿ ಕೌಶೀಲ,ಶಂಶೀಲಾ,ಭೂಮಿಕ ವೈಯಕ್ತಿಕ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ ಮಾತಾಡಿದ ಸ್ಥಳೀಯ ಗ್ರಾ.ಪಂ.ಸದಸ್ಯರು ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ
ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಬಾಗವಹಿಸುವುದರೊಂದಿಗೆ ಕ್ರೀಯಶೀಲರಾಗಿ ಬದುಕು ರೂಪಿಸಿ ಸಮಾಜಕ್ಕೂ ದೇಶಕ್ಕೂ ಮಾದರಿಯಾಗಬೇಕೆಂದು ತಿಳಿಸುತ್ತಾ,ಗೆಲುವು ಸೋಲುಗಳನ್ನು ಸಮಾನವಾಗಿ ಸ್ವೀಕರಿಸಿ ಮುನ್ನಡೆಯಬೇಕೆಂದರು.

ದೇಶದ ಸ್ವಾತಂತ್ರ್ಯ ಅಮೃತಮಹೋತ್ಸವ ಈ ಸಂಧರ್ಭವನ್ನು ನೆನಪಿಸುತ್ತಾ ಎರಡೂ ತಂಡಕ್ಕೂ ಶುಭಕೋರಿದರು.ಪ್ರಶಸ್ತಿ ವಿತರಣೆಯಲ್ಲಿ ಗೌರವದ್ಯಕ್ಷರಾದ ಸುಲೈಮಾನ್ ಹಾಜಿ ಸಿಂಗಾರಿ.ಕೂಟದ ಯಶಸ್ವಿ ಸಂಘಟಕರೂ ಸ್ಥಳೀಯ ನಾರ್ಶ ಪ್ರೌಡಶಾಲಾ ದೈಹಿಕ ಶಿಕ್ಷಕರೂ ಜಿಲ್ಲೆಯ ಉದಯೋನ್ಮುಖ ಕ್ರಿಡಾಪಟುವಾದ ಅಬ್ದುಲ್ ರಪೀಕ್ ಸರ್ ಜೋತೆಗೂಡಿದರು.
ಈ ಸಂದರ್ಭದಲ್ಲಿ ಕೊಳ್ನಾಡು ಗ್ರಾಮ ಪಂಚಾಯತ್ ಅದ್ಯಕ್ಷರಾದ ನೆಬಿಸಾ ಖಾದರ್,ಸ್ಥಳೀಯ ಗ್ರಾ.ಪಂಚಾಯತ್ ಸದಸ್ಯರಾದ ಅಸ್ಮ ಹಸೈನಾರ್,ಶಿಕ್ಷಕರ ಸಂಘದ ಜಿಲ್ಲಾದ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಸುರಿಬೈಲ್, ವಿಷ್ಣು ಹೆಬ್ಬಾರ್,ಅಲಿಸ್ ಪಾಯಸ್ ಸಜಿಪ,ಇಬ್ರಾಹಿಂ ಕಾಡುಮಠ,ಹಸೈನಾರ್ ತಾಳಿತ್ತನೂಜಿ ಇನ್ನಿತರರು ಉಪಸ್ಥಿತರಿದ್ದರು.ನಾರ್ಶ ಪ್ರೌಡಶಾಲಾ ಶಿಕ್ಷಕರಾದ ಶರತ್ ಚೌಟ ಸೇರಿದಂತೆ ಶಿಕ್ಷಕ ಶಿಕ್ಷಕಿಯರು ಸಹಕಾರ ನೀಡಿದರು.ಲತಾ ಮೇಡಂ ಸ್ವಾಗತಿಸಿ ಗೋಪಾಲಕೃಷ್ಣ ಧನ್ಯವಾದ ತಿಳಿಸಿದರು.
