Monday, July 7, 2025
spot_imgspot_img
spot_imgspot_img

ಫಲಾನುಭವಿಗಳಲ್ಲದವರ ಪಾಲಾಯ್ತು ಬಡರೈತರ ₹3,000 ಕೋಟಿ ಕಿಸಾನ್ ಸಮ್ಮಾನ್ ಹಣ

- Advertisement -
- Advertisement -

ನವದೆಹಲಿ: ಪ್ರಧಾನಿ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಲ್ಲಿ ಸರ್ಕಾರದ 3,000 ಕೋಟಿ ಹಣ ಫಲಾನುಭವಿ ರೈತರಲ್ಲದವರ ಪಾಲಾಗಿದೆ ಎಂದು ಅಧಿವೇಶನದಲ್ಲಿ ಕೇಂದ್ರ ಕೃಷಿ ಇಲಾಖೆ ಮಾಹಿತಿ ನೀಡಿದೆ. ಅಲ್ಲದೇ ಈ ಹಣವನ್ನ ಮತ್ತೆ ವಾಪಸ್ ಪಡೆದುಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎಂದು ಸರ್ಕಾರ ಹೇಳಿದೆ.

4 ರಾಜ್ಯಗಳಲ್ಲಿ ಅತೀ ಹೆಚ್ಚು ಹಣ ವಂಚನೆ..?

ಅಸ್ಸಾಂನಲ್ಲಿ 554 ಕೋಟಿ ಹಣ 8.35 ಲಕ್ಷ ಫಲಾನಭವಿಗಳಲ್ಲದ ರೈತರ ಖಾತೆಗೆ ಹೋಗಿದೆ.ತಮಿಳುನಾಡಿನಲ್ಲಿ 340 ಕೋಟಿ ಹಣ 7.22 ಲಕ್ಷ ಫಲಾನಭವಿಗಳಲ್ಲದ ರೈತರ ಖಾತೆಗೆ ಹೋಗಿದೆ.

ಪಂಜಾಬ್​ನಲ್ಲಿ 437 ಕೋಟಿ ಹಣ 5.62 ಲಕ್ಷ ಫಲಾನಭವಿಗಳಲ್ಲದ ರೈತರ ಖಾತೆಗೆ ಹೋಗಿದೆ. ಮಹರಾಷ್ಟ್ರದಲ್ಲಿ 357 ಕೋಟಿ ಹಣ 4.45 ಲಕ್ಷ ಫಲಾನಭವಿಗಳಲ್ಲದ ರೈತರ ಖಾತೆಗೆ ಹೋಗಿದೆ.

ಒಟ್ಟು 42 ಲಕ್ಷ ಮಂದಿ ಫಲಾನುಭವಿಗಳಲ್ಲದ ರೈತರ ಅಕೌಂಟ್​ಗಳಿಗೆ ಕಿಸಾನ್ ಸಮ್ಮಾನ್ ನಿಧಿ ಹಣ ವರ್ಗಾವಣೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

- Advertisement -

Related news

error: Content is protected !!