Sunday, June 29, 2025
spot_imgspot_img
spot_imgspot_img

ರಾಜಸ್ಥಾನದಿಂದ-ಬೆಂಗಳೂರಿಗೆ ಪ್ಲೈಟ್ ನಲ್ಲಿ ಬಂದಿಳಿದು ಕಳ್ಳತನ ಮಾಡಿ ಪ್ಲೈಟ್ ನಲ್ಲಿ ತೆರಳುತ್ತಿದ್ದ ಖತರ್‍’ನಾಕ್ ಕಳ್ಳ.!

- Advertisement -
- Advertisement -

ರಾಜಸ್ಥಾನದಿಂದ ಪತ್ನಿಯ ಎದುರು ಏರ್ ಪೋರ್ಟ್’ನಲ್ಲಿ ವಿಮಾನ ಹತ್ತಿ ಬೆಂಗಳೂರಿಗೆ ಬಂದು ಕಳ್ಳತನ ಮಾಡಿ ದುಡ್ಡು ಸಂಪಾದಿಸಿ ಹೆಂಡತಿಯನ್ನು ದೊಡ್ಡ ಶ್ರೀಮಂತನಂತೆ ಮೆಚ್ಚಿಸುತ್ತಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬಂದಿಸಿದ್ದಾರೆ.

ಆರೋಪಿ ಉಮೇಶ್ ಖತ್ತಿಕ್ ಎಂಬ ರಾಜಸ್ತಾನ ಮೂಲದ ವ್ಯಕ್ತಿಯೊಬ್ಬ ಬೆಂಗಳೂರಿನಲ್ಲಿ ಪ್ಲೈಟ್ ನಿಂದ ಇಳಿದು ಯಾರದ್ದಾದರೂ ನಿಲ್ಲಿಸಿದ್ದ ಬೈಕ್’ನ್ನು ಕಳ್ಳತನ ಮಾಡುತ್ತಾನೆ. ಬಳಿಕ ಅದೇ ಬೈಕ್​ನಲ್ಲಿ ಸುತ್ತಾಡಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರ ಕದಿಯುತ್ತಿದ್ದ. ಹೀಗೆ ಬೆಂಗಳೂರಿನಲ್ಲಿ ಒಂದೇ ದಿನ ಮೂರು ಕಡೆ ಸರಗಳ್ಳತನ ಮಾಡಿದ್ದ ಎನ್ನಲಾಗಿದೆ.

ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು, ಪುಟ್ಟೇನಹಳ್ಳಿ, ಮಾರತಹಳ್ಳಿಯಲ್ಲಿ ಸರಗಳ್ಳತನವನ್ನು ಈತನೇ ಮಾಡಿದ್ದ. ಬಳಿಕ ಹೈದರಾಬಾದ್​ಗೆ ಹೋಗಿ ಅಲ್ಲಿ ಕೂಡ ಇದೇ ಕೃತ್ಯವನ್ನು ಮಾಡಿದ್ದಾನೆ. ಇದೀಗ ಖಚಿತ ಮಾಹಿತಿ ಮೇರೆಗೆ ರಾಜಸ್ಥಾನಕ್ಕೆ ತೆರಳಿ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಈತ ಇದುವರೆಗೆ ರಾಜಸ್ಥಾನದಲ್ಲಿ 18, ಹೈದಾರಾಬಾದ್ 8, ಬೆಂಗಳೂರಿನಲ್ಲಿ 7 ಪ್ರಕರಣದ ಆರೋಪಿಯಾಗಿದ್ದಾನೆ.

- Advertisement -

Related news

error: Content is protected !!