ವಿಟ್ಲ: ಹಳ್ಳಿಯಲ್ಲಿ ಬದುಕು ಕೊಡುವ ಶಕ್ತಿಯಿದೆ. ಹಲವಾರು ದುಃಖ ದುಗುಡಗಳು ಎಲ್ಲಾ ಕಡೆಗಳಲ್ಲಿದೆ. ಅವೆಲ್ಲವನ್ನೂ ಸರಿಪಡಿಸಿಕೊಂಡು ಹೋಗುವ ಚಾಕಚಕ್ಯತೆ ನಮ್ಮಲ್ಲಿರಬೇಕು. ಆಗ ಮಾತ್ರ ಜಯ ನಮ್ಮದಾಗುತ್ತದೆ ಎಂದು ಶಾಸಕರಾದ ಸಂಜೀವ ಮಠಂದೂರುರವರು ಹೇಳಿದರು.

ಮಾ.7ರಂದು ಭಾರತೀಯ ಜನತಾ ಪಾರ್ಟಿ ಕುಳ ಶಕ್ತಿಕೇಂದ್ರದ ವತಿಯಿಂದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಯಗಳಿಸಲು ಕಾರಣೀಕರ್ತರಾದ ಮತದಾರ ಬಂಧುಗಳಿಗೆ, ಕಾರ್ಯಕರ್ತರಿಗೆ, ನೂತನವಾಗಿ ಆಯ್ಕೆಯಾದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಪಾಂಡೇಲು ನಾರಾಯಣ ಶೆಟ್ಟಿಯವರ ಮನೆಯಲ್ಲಿ ನಡೆದ ಅಭಿನಂದನಾ ಸಭೆಯನ್ನು ಉದ್ಘಾಟಿಸಿ ಶಾಸಕರು ಮಾತನಾಡಿದರು.

ಜನಹಿತ ಕಾಪಾಡುವ ಸದಸ್ಯರು ನಾವಾಗಬೇಕು. ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ನಾವು ಶಕ್ತಿಪ್ರದರ್ಶಣ ಮಾಡಬೇಕು. ಕುಳ ಒಂದು ಸಂಘದ ಶಕ್ತಿಕೇಂದ್ರವಾಗಿದೆ. ಸಾಮಾನ್ಯ ಜನರೆ ಬದಲಾವಣೆಯ ಹರಿಕಾರರು. ಮುಂದಿನ ಐದು ವರುಷಗಳ ಸಾಧನೆಯೇ ನಮ್ಮ ಯಶಸ್ಸಿಗೆ ಸಹಕಾರಿಯಾಗುತ್ತದೆ ಎಂದರು.

ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷರಾದ ಸಾಜಾ ರಾಧಾಕೃಷ್ಣ ಆಳ್ವರವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಪುಣಚ ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ ಹರಿಪ್ರಸಾದ್ ಯಾದವ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಟ್ಲ ತಾಲೂಕು ಗೋಸೇವಾ ಪ್ರಮುಖ್ ತಿಮ್ಮಪ್ಪ ಮಂಜಪ್ಪಾಲು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬುಡಿಯಾರ್ ರಾಧಾಕೃಷ್ಣ ರೈ, ಬಿ.ಜೆ.ಪಿ. ಮಂಡಲ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಮಂಡಲ ಕೋಶಾಧಿಕಾರಿ ರಮೇಶ್ ಭಟ್ ಎಂ.ಹೆಚ್ಚ್, ತಾಲೂಕು ಪಂಚಾಯತ್ ಸದಸ್ಯೆ ವನಜಾಕ್ಷಿ ಭಟ್, ಇಡ್ಕಿದು ಗ್ರಾ.ಪಂ ಉಪಾಧ್ಯಕ್ಷರಾದ ಯಶೋಧ ಕಂಪ, ಹಿರಿಯರಾದ ನಾರಾಯಣ ಶೆಟ್ಟಿ ಪಾಂಡೇಲುಗುತ್ತು, ಬಂಟ್ವಾಳ ಎಪಿಎಂಸಿ ಸದಸ್ಯರಾದ ಜಗದೀಶ್ ದೇವಸ್ಯ, ಇಡ್ಕಿದು ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ರಾಮ್ ಭಟ್ ನೀರಪಳಿಕೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿಜೇತ ಗ್ರಾ.ಪಂ. ಸದಸ್ಯರುಗಳಿಗೆ ಶಾಸಕರು ಶಾಲು ಹೊದಿಸಿ ಸನ್ಮಾನಿಸಿದರು. ಗ್ರಾ.ಪಂ ಸದಸ್ಯ ಚಿದಾನಂದ ಪೆಲತ್ತಿಂಜ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲೊಕೇಶ್ ಅಡ್ಯಾಲು, ಸುಂದರ ಗೌಡ ಪಾಂಡೇಲು, ಪುರಂದರ ಪಿಲಿಪ್ಪೆ, ರಾಜೇಶ್ ಕಾರ್ಯಾಡಿ, ರತ್ನಾವತಿ ಶೇಕೆಹಿತ್ಲು, ಕಿರಣ್, ದೀಪಿಕಾ ಕಂಟ್ರಮಜಲು, ಹೊನ್ನಪ್ಪ ಪಾಂಡೇಲು, ನಾರಾಯಣ ಮೂಲ್ಯ ಕುಂಡಡ್ಕ ಶೆಡ್ಡು, ಬಾಲಕೃಷ್ಣ ಪಿ.ಆರ್, ಭರತ್ ಕಂಪ, ಜತ್ತಪ್ಪ ಅಡ್ಯಾಲು, ನೀಲಪ್ಪ ಪಾಂಡೇಲು, ಕೇಶವ ಪಾಂಡೇಲು ಮೊದಲಾದವರು ಅತಿಥಿಗಳನ್ನು ಶಾಲು ಹೊದಿಸಿ ಸ್ವಾಗತಿಸಿದರು.


ಲಹರಿ ಕಾರ್ಯಾಡಿ ಪ್ರಾರ್ಥಿಸಿದರು, ಕುಳ ಶಕ್ತಿಕೇಂದ್ರದ ಸಂಚಾಲಕರಾದ ಕೃಷ್ಣಪ್ಪ ಅಡ್ಯಾಲು ಸ್ವಾಗತಿಸಿದರು. ಮನೋಜ್ ಕಂಪ ವಂದಿಸಿದರು.

