Sunday, June 29, 2025
spot_imgspot_img
spot_imgspot_img

ವಿಟ್ಲ ವಲಯ ಯುವ ಬಂಟರ ಸಂಘದ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಪಟ್ಲ ಸತೀಶ್‌ ಶೆಟ್ಟಿಯವರಿಗೆ ಗೌರವಾರ್ಪಣೆ

- Advertisement -
- Advertisement -

ವಿಟ್ಲ ವಲಯ ಯುವ ಬಂಟರ ಸಂಘದ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಪಟ್ಲ ಸತೀಶ್‌ ಶೆಟ್ಟಿಯವರಿಗೆ ವಿಟ್ಲ ಬಂಟರ ಸಂಘದ ವತಿಯಿಂದ ಗೌರವ ಸಲ್ಲಿಸಲಾಯಿತು.

ಈ ವೇಳೆ ವಿಟ್ಲ ವಲಯ ಬಂಟರ ಸಂಘದ ಅಧ್ಯಕ್ಷ ರಾಧಾಕೃಷ್ಣ ರೈ ಚೆಲ್ಲಡ್ಕ, ಉಪಾಧ್ಯಕ್ಷರಾದ ಶ್ರೀಧರ ಶೆಟ್ಟಿ ಗುಬ್ಯ ಮೇಗಿನಗುತ್ತು, ಜತೆ ಕಾರ್ಯದರ್ಶಿ ರೂಪೇಶ್ ಶೆಟ್ಟಿ ಅಳಿಕೆಗುತ್ತು, ಬೆಡೆಮಾರ್ ಜಗಜ್ಜೀವನ್ ರಾಮ್ ಉಪಸ್ಥಿತರಿದ್ದರು.

ವಿಟ್ಲ ವಲಯ ಬಂಟರ ಸಂಘದ ಸಭೆಯಲ್ಲಿ ಯುವ ಬಂಟರ ಸಂಘದ ಅಧ್ಯಕ್ಷರಾಗಿ ಉದ್ಯಮಿ ಗುಬ್ಯ ರಂಜಿತ್‌ ಶೆಟ್ಟಿ ಮತ್ತು ಕಾರ್‍ಯದರ್ಶಿಯಾಗಿ ಸುಮಿತ್‌ ಶೆಟ್ಟಿ ಮೂಡೈಮಾರ್‌ ರವರನ್ನು ಆಯ್ಕೆ ಮಾಡಲಾಯಿತು.

- Advertisement -

Related news

error: Content is protected !!