Monday, June 30, 2025
spot_imgspot_img
spot_imgspot_img

ಸಮುದ್ರ ಮೀನುಗಾರಿಕೆ ವೇಳೆ ನೀರಿಗೆ ಬಿದ್ದು ವಿಟ್ಲ ಮೂಲದ ವ್ಯಕ್ತಿ ಮೃತ್ಯು

- Advertisement -
- Advertisement -

ಕಾಪು: ಮೀನುಗಾರಿಕೆ ನಡೆಸಿ ವಾಪಸ್ಸಾಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ವಿಟ್ಲ ಪೆರುವಾಯಿ ಮೂಲದ ಮೀನುಗಾರ ಆನಂದ ಅವರ ಮೃತದೇಹ ಇಂದು ಬೆಳಿಗ್ಗೆ ಕಾಪು ಸಮುದ್ರದಲ್ಲಿ ಪತ್ತೆಯಾಗಿದೆ.

ಜ.4 ರಂದು ಆನಂದ ಅವರು ಮಂಗಳೂರು ಬಂದರಿನಿಂದ ಮೀನುಗಾರಿಕೆಗೆ ಹೋಗಿ ವಾಪಸ್ಸು ಬರುವಾಗ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದ ನೀರಿಗೆ ಬಿದ್ದು ಮೃತಪಟ್ಟಿದ್ದರು. ಇಂದು ಬೆಳಿಗ್ಗೆ ಇವರ ಮೃತದೇಹ ಕಾಪು ಸಮೀಪ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ತಿಳಿದು ಈಶ್ವರ್ ಮಲ್ಪೆ ಅವರು ಪ್ರತಾಪ್ ಪಡುಕೆರೆ ಅವರ ಜೊತೆಗೆ ತೆರಳಿ ಪರ್ಸಿನ್ ಬೋಟಿನವರ ಸಹಕಾರದೊಂದಿಗೆ ಮೃತದೇಹವನ್ನು ದಡಕ್ಕೆ ತಂದರು ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!