ಬೆಳ್ತಂಗಡಿ: ದೃಷ್ಟಿ ದೋಷದ ಸಮಸ್ಯೆಯನ್ನು ಎದುರಿಸುತ್ತಿದ್ದ ವ್ಯಕ್ತಿಯೊಬ್ಬರ ಬಾಳಿನಲ್ಲಿ ಚಾಮುಂಡೇಶ್ವರಿಯು ದೃಷ್ಟಿ ಮರಳಿ ಬರಿಸುವ ಮೂಲಕ ಮತ್ತೊಮ್ಮೆ ಕಾರಣಿಕ ಮೆರೆದಿದ್ದಾಳೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಆರಿಕೋಡಿಯಲ್ಲಿ ನೆಲೆ ನಿಂತಿರುವ ತಾಯಿ ಚಾಮುಂಡೇಶ್ವರಿಯು ಪವಾಡ ಮೆರೆದಿದ್ದಾಳೆ.
ಇಲ್ಲಿನ ಪುತ್ತೂರು ತಾಲೂಕಿನ ನವೀನ್ ಕೊಯಿಲ ಅವರು ತಾಯಿ ಚಾಮುಂಡೇಶ್ವರಿ ಕೃಪೆಯಿಂದ ದೃಷ್ಟಿಯನ್ನು ಮರಳಿ ಪಡೆದುಕೊಂಡ ವ್ಯಕ್ತಿಯಾಗಿದ್ದಾರೆ. ಇವರಿಗೆ ಸುಮಾರು ವರ್ಷಗಳಿಂದ ಕಣ್ಣು ಕಾಣುತ್ತ ಇರಲಿಲ್ಲ . ಆಗ ನೊಂದ ಅವರ ಕುಟುಂಬವು ಆರಿಕೋಡಿಯ ಚಾಮುಂಡೇಶ್ವರಿ ದೇವಿ ಸನ್ನಿಧಿಗೆ ಬಂದು ತಮ್ಮ ನೋವನ್ನ ಹೇಳಿಕೊಂಡಿದ್ದರು.
ಇವರ ಕಷ್ಟ ಆಲಿಸಿ ಚಾಮುಂಡೇಶ್ವರಿ ಅಮ್ಮನವರು ತಮ್ಮ ಕೃಪಾ ದೃಷ್ಟಿಯನ್ನು ಇವರ ಮೇಲೆ ಬೀರಿದ್ದು ಎಲ್ಲರಂತೆ ಓಡಾಡುತ್ತಿದ್ದೇನೆ ಎಂದು ನವೀನ್ ಕೊಯಿಲ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಈ ಹಿಂದೆ ನಡೆದಾಡಲು ಅಸಾಧ್ಯವಾದ ಕಡಬ ಮೂಲದ ಯುವಕನೊಬ್ಬನ ಬಾಳಿನಲ್ಲಿ ಆತನನ್ನು ನಡೆದಾಡುವಂತೆ ಮಾಡುವ ಮೂಲಕ ಆರಿಕೋಡಿಯ ತಾಯಿ ಚಾಮುಂಡೇಶ್ವರಿ ತನ್ನ ಕಾರಣಿಕರವನ್ನು ಮೆರೆದಿದ್ದಳು.