- Advertisement -
- Advertisement -
ಬೆಂಗಳೂರು: ನಗರದ ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಅಕ್ರಮವಾಗಿ ಜೀವಂತ ಮೊಸಳೆ ಮರಿಯ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆಸಾಮಿಗಳನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್ ಖಾಲೀದ್ ಮತ್ತು ಗಂಗಾಧರ್ ಬಿ.ಎನ್ ಬಂಧಿತ ಆರೋಪಗಳು. ಇವರು ಬಿಳಿ ಕ್ಯಾನ್ನಲ್ಲಿ ಮೊಸಳೆ ಮರಿಯನ್ನಿಟ್ಟುಕೊಂಡು ಈಶ್ವರಿ ಥಿಯೇಟರ್ ಬಳಿ ಮಾರಾಟ ಮಾಡಲು ಬಂದಿದ್ದಾರೆ.
ಇದನ್ನ ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನು ಬಂಧಿಸಿ ಮೊಸಳೆಯ ಮರಿಯನ್ನು ರಕ್ಷಿಸಿದ್ದಾರೆ. ಇನ್ನು ಆರೋಪಿಗಳ ಮೇಲೆ ವನ್ಯಜೀವಿ ಸಂರಕ್ಷಣೆ ಕಾಯ್ದೆ 1972ರ ಅನ್ವಯ ಕೇಸ್ ದಾಖಲಿಸಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
- Advertisement -