Thursday, April 25, 2024
spot_imgspot_img
spot_imgspot_img

ಅಪಘಾತದಲ್ಲಿ ಗಾಯಗೊಂಡ ಯುವಕರನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಆಟೋಚಾಲಕ

- Advertisement -G L Acharya panikkar
- Advertisement -

ಬಂಟ್ವಾಳ: ಸಜೀಪ ಮೂಡ ಗ್ರಾಮದ ಪೆಲತ್ತಕಟ್ಟೆ ಎಂಬಲ್ಲಿ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕರನ್ನು ಸ್ಥಳೀಯರ ಸಹಕಾರದಿಂದ ವಿಠಲ ಕಂದೂರು ಇವರು ತನ್ನ ಆಟೋ ರಿಕ್ಷಾದಲ್ಲಿ ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿ ಗಾಯಾಳುಗಳ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇವರ ಈ ಮಾನವೀಯ ಕಾರ್ಯಕ್ಕೆ ಎಲ್ಲಾ ಕಡೆ ಪ್ರಶಂಸೆ ವ್ಯಕ್ತವಾಗಿದೆ. ಯಾವುದೇ ಬಾಡಿಗೆ ಪಡೆಯದೆ ಮಾನವೀಯತೆಯಿಂದ ಮತ್ತು ಚಾಲಕನಾಗಿ ಇದು ನನ್ನ ಕರ್ತವ್ಯ ಎಂದುಕೊಂಡು ಈ ಕಾರ್ಯವನ್ನು ವಿಠಲ ಅವರು ಮಾಡಿದ್ದಾರೆ.

ಮಾರ್ನಬೈಲ್ ರಿಕ್ಷಾ ಪಾರ್ಕಿನ ಸದಸ್ಯರಾಗಿರುವ ವಿಠಲ ಕಂದೂರು ಇವರು ಈ ಹಿಂದೆ ಹಲವು ಬಾರಿ ರಸ್ತೆ ಅಪಘಾತಗಳು ನಡೆದಾಗಲೂ ತನ್ನ ಆಟೋದಲ್ಲಿ ಬಾಡಿಗೆ ಪಡೆಯದೇ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಮಾನವೀಯ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಈ ಭಾಗದ ಆಪತ್ಭಾಂದವ ರಾಗಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!