Friday, July 4, 2025
spot_imgspot_img
spot_imgspot_img

ಉಡುಪಿಯಲ್ಲೊಂದು ಮನಹಿಂಡುವ ಘಟನೆ; ಶವದೊಂದಿಗೆ 3 ದಿನ ಕಳೆದ ಹೆತ್ತವ್ವ ಮತ್ತು ಸಹೋದರಿ

- Advertisement -
- Advertisement -

ಉಡುಪಿ: ಕೊಳೆತ ಶವದೊಂದಿಗೆ ಹೆತ್ತವ್ವ ಹಾಗೂ ಸಹೋದರಿ ಮೂರು ನಾಲ್ಕು ದಿನಗಳನ್ನು ಕಳೆದ ಘಟನೆ ನಡೆದಿದೆ. ಉಡುಪಿಯ ಕಾಡಬೆಟ್ಟು ಎಂಬಲ್ಲಿನ ಕುಟುಂಬದ ಸ್ಥಿತಿ ನಿಜಕ್ಕೂ ಮನಕಲಕುವಂತಿದೆ.

ಹರಿಶ್ಚಂದ್ರ ಪೂಜಾರಿ (62) ಎಂಬುವವರು ಕಳೆದ ಮೂರು ದಿನಗಳ ಹಿಂದೆ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಮನೆಯಲ್ಲಿ ಮನೋವ್ಯಾಧಿಯಿಂದ ಬಳಲುತ್ತಿರುವ ಮೃತರ ತಾಯಿ ಮತ್ತು ಸಹೋದರಿ ಕೊಳೆತ ಶವದೊಂದಿಗೆ 3 ದಿನಗಳನ್ನು ಕಳೆದಿದ್ದಾರೆ. ವಾಸನ ಹಬ್ಬಿದರಿಂದ ಸ್ಥಳಿಯರಿಗೆ ವಿಷಯ ತಿಳಿದುಬಂದಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಠಾಣಾ ನಿರೀಕ್ಷಕ ಪ್ರಮೋದ್ ಪಿ, ಠಾಣಾಧಿಕಾರಿ ಮಹೇಶ್, ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು ಕಾನೂನು ಪ್ರಕ್ರಿಯೆ ನಡೆಸಿದರು. ಕಳೇಬರ ವೈದ್ಯಕೀಯ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು, ಎಂ ಸಂದೀಪ್ ಕುಮಾರ್, ಮಹೇಶ್ ಪೂಜಾರಿ ಶಿರಿಬೀಡು ಸಹಕರಿಸಿದರು.

- Advertisement -

Related news

error: Content is protected !!