Sunday, April 28, 2024
spot_imgspot_img
spot_imgspot_img

ಉಡುಪಿ: ಈತನ ವಿರುದ್ಧ ಸಾಕ್ಷಿ ಹೇಳಿದ್ದೇ ತಪ್ಪಾಯ್ತು..! ಜೈಲಿನಿಂದ ಬಂದ ವ್ಯಕ್ತಿಯಿಂದ ಕಾರು ತಡೆದು ಹಲ್ಲೆ

- Advertisement -G L Acharya panikkar
- Advertisement -

ಉಡುಪಿ: ಕೇಸು ಒಂದರಲ್ಲಿ ಜೈಲು ಸೇರಿದ್ದ ವ್ಯಕ್ತಿಯೋರ್ವ ತನ್ನ ಹಿಂದಿನ ಸೇಡಿಗೆ ಪ್ರತಿಕಾರವಾಗಿ ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿದೆ ಘಟನೆ ನಡೆದಿದೆ. ಗವಂಜಿ ಶಾಯಿದ್ ಎಂಬಾತ ಕಾಡು ಕೋಣ ಕೊಂದು ಜೈಲು ಸೇರಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿ ಜಾಮೀನು ಪಡೆದುಕೊಂಡಿದ್ದ ಆರೋಪಿ ತಾನು ಜೈಲಿಗೆ ಹೋಗಲು ಕಾರಣರಾದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ. ಬೈಂದೂರಿನ ಒತ್ತಿನಣೆ ಏರಿನಲ್ಲಿ ಈ ಘಟನೆ ಸಂಭವಿಸಿದೆ.

ಈ ಬಗ್ಗೆ ಹಲ್ಲೆಗೊಳಗಾದ ಬೈಂದೂರಿನ ಗುಲ್ವಾಡಿಯ ಅಬುಬಕ್ಕರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ನ.೧ ಅಬುಬಕ್ಕರ್ ರವರು ಅವರ ಗೆಳೆಯನೊಂದಿಗೆ ಕಾರಿನಲ್ಲಿ ಬೈಂದೂರಿನಿಂದ ಭಟ್ಕಳ ಕಡೆ ಹೋಗುತ್ತಿದ್ದರು. ಈ ವೇಳೆ ಗವಂಜಿ ಶಾಯಿದ್ ಅಬುಬಕ್ಕರ್ ಅವರ ಕಾರನ್ನು ತಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

- Advertisement -

Related news

error: Content is protected !!