ಪ್ರೀತಿಸಿದ ಯುವತಿಯೊಂದಿಗೆ ಬ್ರೇಕಪ್ ಮಾಡಿಕೊಂಡ ಯುವಕನೊಬ್ಬ ಆಕೆಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ತುಂಡು ಮಾಡಿ, ಆ ಭಾಗಗಳನ್ನು ಅಂಬೋಲಿ ಘಾಟ್ನಲ್ಲಿ ಬಿಸಾಡಿರುವ ಆಘಾತಕಾರಿ ಘಟನೆ ಗೋವಾದಲ್ಲಿ ನಡೆದಿದೆ.
ಈ ಕೊಲೆ ಆರೋಪದ ಮೇಲೆ 22 ವರ್ಷದ ಯುವಕನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. 30 ವರ್ಷದ ತನ್ನ ಗೆಳತಿ ಕಾಮಾಕ್ಷಿ ಶಂಕರ್ ಉದ್ದಪ್ನೋವ್ ಎಂಬಾಕೆಯನ್ನು ಕೊಂದ ನಂತರ ಆರೋಪಿ ಫಕೀರ್ ಅಲಿಯಾಸ್ ಪ್ರಕಾಶ್ ಚುಂಚ್ವಾಡ್ ಆಕೆಯ ದೇಹವನ್ನು ಕೊಲೆ ಮಾಡಿದ ಸ್ಥಳದಿಂದ 80 ಕಿ.ಮೀ ದೂರದಲ್ಲಿರುವ ಮಹಾರಾಷ್ಟ್ರದ ಅಂಬೋಲಿ ಘಾಟ್ನಲ್ಲಿ ಎಸೆದಿದ್ದಾನೆ. ಚುಂಚ್ವಾಡ್ ಕಾಮಾಕ್ಷಿ ಉದ್ದಪ್ನೋವ್ ಅವರ ಫ್ಲಾಟ್ನಲ್ಲಿ ಆತ ತನ್ನ ಪ್ರೇಯಸಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಗೋವಾದ ಪೊರ್ವೊರಿಮ್ನಲ್ಲಿ ಆಗಸ್ಟ್ 29ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.
ಪ್ರೇಯಸಿಯನ್ನು ಕೊಂದ ನಂತರ ಆತ ತನ್ನ ಸ್ನೇಹಿತನ ಸಹಾಯದಿಂದ ಶವವನ್ನು ಅಂಬೋಲಿ ಘಾಟ್ಗೆ ತೆಗೆದುಕೊಂಡು ಹೋಗಿ ಎಸೆದಿದ್ದಾನೆ. ಕೊಲೆಗೂ ಮುನ್ನ ಯುವತಿಯೊಂದಿಗೆ ಜಗಳವಾಡಿದ್ದ ಆತನ ವಿರುದ್ಧ ಮಾಪುಸಾ ಪೊಲೀಸ್ ಠಾಣೆಯಲ್ಲಿ ನಾನ್-ಕಾಗ್ನಿಸೆಬಲ್ ಅಪರಾಧ ಪ್ರಕರಣ ದಾಖಲಾಗಿತ್ತು. ತನ್ನ ವಿರುದ್ಧ ಕೇಸ್ ದಾಖಲಿಸಿದ ಪ್ರೇಯಸಿಯ ಮೇಲೆ ಕೋಪದಿಂದ ಆಕೆಯನ್ನು ಪೊರ್ವೊರಿಮ್ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಕೊಲೆ ಮಾಡಿದ್ದಾನೆ. ಪೊರ್ವೊರಿಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದ ಕುರಿತು ತನಿಖೆ ನಡೆಸುವಾಗ ಮೃತ ಯುವತಿಯ ಪ್ರಿಯಕರನ ಮೇಲೆ ಅನುಮಾನ ಉಂಟಾಗಿ ವಿಚಾರಣೆ ನಡೆಸಿದಾಗ ಆತ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.