ಉಡುಪಿ : ಬೀದಿ ವೇಶ್ಯೆಯರು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಫೀಲ್ಡ್ಗಿಳಿದ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಈ ಘಟನೆ ಉಡುಪಿಯ ಹಳೆ ಸರ್ಕಾರಿ ಬಸ್ ನಿಲ್ದಾಣದ ಬಳಿ ನಡೆದಿದೆ.
ವೇಶ್ಯಯರು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಾರೆ ಎಂಬ ದೂರಿನ ಆಧಾರದ ಮೇಲೆ ಉಡುಪಿ ನಗರ ಠಾಣೆಯ ಪೊಲೀಸರು ಕೆಲವು ವೇಶ್ಯೆಯರ ಗುಂಪಿನ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ. ಇದರಿಂದ ಅಲ್ಲಿದ್ದ ಆ ಮಹಿಳೆಯರ ಗುಂಪು ಪರಾರಿಯಾಗಿದೆ.
ಪೊಲೀಸರು ಲಾಠಿ ಬೀಸುವಾಗ ಒಂದು ಪೆಟ್ಟು ಅಲ್ಲಿ ಇದ್ದ ಒಂದು ಮಂಗಳಮುಖಿಯೊಬ್ಬರಿಗೆ ಬಿದ್ದಿದೆ. ಆ ಮುಂಗಳಮುಖಿಯೊಬ್ಬರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.
ಹಳೆ ಸರ್ಕಾರಿ ಬಸ್ಟಾಂಡ್ ಬಳಿ ಅಲ್ಲಿ ಬೀದಿ ವೇಶ್ಯೆಯರ ಹಾವಾಳಿ ಹೆಚ್ಚಾಗಿದೆ ಮತ್ತು ವೇಶ್ಯಾವಾಟಿಕೆ ನಿರಂತರ ನಡೆಯುತ್ತಿದೆ. ಅಲ್ಲಿಯ ಪಕ್ಕದ ಲಾಡ್ಜ್ ಗಳಲ್ಲಿ ಕೂಡ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಆರೋಪ ಕೇಳಿ ಬರುತ್ತಿದೆ. ಈ ಬೀದಿ ವೇಶ್ಯಯರ ಅಸಭ್ಯ ವರ್ತನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದರ ಬಗ್ಗೆ ನಗರಠಾಣೆಯ ದಕ್ಷ ಹಾಗೂ ಖಡಕ್ ಪೊಲೀಸ್ ಅಧಿಕಾರಿ ಪ್ರಮೋದ್ ಕುಮಾರ್ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.