- Advertisement -
- Advertisement -
ಉಡುಪಿ: ಹಿರಿಯ ಜನಪದ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗುರುವ ಕೊರಗ (105) ಇಂದು ನಿಧನರಾಗಿದ್ದಾರೆ. ಸಾಂಪ್ರದಾಯಿಕ ಡೋಲು ವಾದನದ ಮೂಲಕ ಜನಪದ ಕಲಾಪ್ರಕಾರದಲ್ಲಿ ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಂಡ ಅವರು ಉಡುಪಿ ತಾಲೂಕಿನ ಹಿರಯಡ್ಕ ಸಮೀಪದ ಗುಡ್ಡೆ ಅಂಗಡಿಯ ಬಲ್ಕೋಡಿ ನಿವಾಸಿಯಾಗಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ, ಜನಪದ ಶ್ರೀ, ತುಳು ಅಕಾಡೆಮಿ ಪ್ರಶಸ್ತಿ ಅವರಿಗೆ ಲಭಿಸಿದೆ. ಇತ್ತೀಚಿಗೆ ಅನಾರೋಗ್ಯಕ್ಕೆ ಒಳಗಾಗಿದ್ದು, ಇಂದು ವಯೋ ಸಹಜ ಖಾಯಿಲೆಯಿಂದ ಮೃತಪಟ್ಟಿದ್ದಾರೆ.
- Advertisement -