Sunday, April 28, 2024
spot_imgspot_img
spot_imgspot_img

ಸಾಲಭಾದೆ ತಾಳಲಾರದೆ ಪುತ್ರ ಮತ್ತು ಪತ್ನಿಯನ್ನು ನದಿಗೆ ತಳ್ಳಿ ಆತ್ಮಹತ್ಯೆಗೆ ಶರಣಾದ ಉದ್ಯಮಿ

- Advertisement -G L Acharya panikkar
- Advertisement -

ಉದ್ಯಮಿಯೋರ್ವರು ಪುತ್ರ ಮತ್ತು ಪತ್ನಿಯನ್ನು ನದಿಗೆ ತಳ್ಳಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾರವಾರದ ಗೋಪಶಿಟ್ಟಾ ಮೂಲದ ಶ್ಯಾಮ್​ ಪಾಟೀಲ್​​(40), ಜ್ಯೋತಿ ಪಾಟೀಲ್​​(35), ದಕ್ಷ​​(12) ಮೃತ ದುರ್ದೈವಿಗಳು. ಗೋವಾದ ಕುಕ್ಕಳ್ಳಿಯಲ್ಲಿ ವಾಸವಿದ್ದರು. ಸಾಲಬಾಧೆಯಿಂದ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕಾರವಾರ ಕಾಳಿ ನದಿ ಬ್ರಿಜ್​ನಿಂದ ಪತ್ನಿ, ಮಗನನ್ನು ದೂಡಿದ್ದಾರೆ ಎನ್ನಲಾಗುತ್ತಿದ್ದು, ಸದ್ಯ ದೇವಭಾಗ ಕಡಲ ತೀರದಲ್ಲಿ ಜ್ಯೋತಿ​​​ ಹಾಗೂ ದಕ್ಷನ​​ ಶವ ಪತ್ತೆಯಾಗಿದೆ.

ಉದ್ಯಮಿ ಶ್ಯಾಮ ಪಾಟೀಲ್​ ದೇಹ ಗೋವಾದ ಕುಕಳ್ಳಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗೋವಾ ವೆರ್ನಾದಲ್ಲಿ ಕಾರ್ಮಿಕರ ಪೂರೈಕೆ ಉದ್ಯಮ ಹೊಂದಿದ್ದರು. ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!