Sunday, May 5, 2024
spot_imgspot_img
spot_imgspot_img

ಉಡುಪಿ: ರಿಕ್ಷಾದಲ್ಲಿ ಬಾಡಿಗೆಗೆ ಹೋದ ಚಾಲಕ ಏಕಾಎಕಿ ನಾಪತ್ತೆ!!

- Advertisement -G L Acharya panikkar
- Advertisement -
vtv vitla

ಉಡುಪಿ : ಸ್ಕೂಲ್ ಬಸ್‌ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿ ಏಕಾಎಕಿ ಮನೆಗೆ ವಾಪಸ್ ಬಾರದೆ ನಾಪತ್ತೆಯಾಗಿದ್ದು ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪುಕರಣ ದಾಖಲಾಗಿದೆ. ಬ್ಯಾಂಕ್ ಆಫ್ ಬರೋಡಾ ಶಾಖೆಯ ಬಳಿಯ ನಿವಾಸಿ ಶೈಲೇಶ್ ಕೆ. ಪುಭು (44) ನಾಪತ್ತೆಯಾದ ವ್ಯಕ್ತಿ.

ಕೆಲವು ತಿಂಗಳ ಹಿಂದೆ ರಿಕ್ಷಾ ಖರೀದಿಸಿ ಚಾಲಕನಾಗಿ ಕೂಡ ಶೈಲೇಶ್ ದುಡಿಯುತ್ತಿದ್ದು, ಈ ವೇಳೆಗೆ ಬಾಡಿಗೆಗೆ ಹೋದವರು ಊಟಕ್ಕೆ ಬಾರದ ಇದಾಗ ಪತ್ನಿ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಶೈಲೇಶ್ “ಬರೋಡಾ ಬ್ಯಾಂಕ್‌ನ ಸಿಬಂದಿಗೆ ಊಟ ಕೊಟ್ಟು ಬರುತ್ತೇನೆ” ಎಂದು ತಿಳಿಸಿ ಮನೆಗೆ ವಾಪಸ್ ಬಾರದ ಹಿನ್ನಲೆ ಪತ್ನಿ ಅಂಬಿಕಾ ಸಂಬಂಧಿಕರೆಲ್ಲರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಎಲ್ಲಿಯೂ ಪತ್ತೆಯಾಗಿಲ್ಲ. ಪತ್ನಿ ಅಂಬಿಕಾ ಪ್ರಭು ನೀಡಿದ ದೂರಿನಂತೆ ಶಿರ್ವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!