ಉಡುಪಿ: ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ಬರೋಬ್ಬರಿ 25 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಇನ್ನಿತರ ಸಾಮಾಗ್ರಿಗಳನ್ನು ಕಳವು ಗೈದ ಘಟನೆ ನಡೆದಿದೆ. ಉಡುಪಿ ಕೋರ್ಟ್ ಹಿಂಬದಿ ರಸ್ತೆಯಲ್ಲಿರುವ ರುಕ್ಮಿಣಿ ಕೃಷ್ಣ ಮನೆಯಲ್ಲಿ ವಕೀಲೆ ವಾಣಿ ವಿ ರಾವ್ ಎಂಬವರು ವಾಸವಾಗಿದ್ದ ಮನೆಯಲ್ಲಿ ಕಳವುಗೈಯಲಾಗಿದೆ.
ಬೆಡ್ರೂಂನಲ್ಲಿದ್ದ ಕಬ್ಬಿಣದ ಕಪಾಟಿನ ಲಾಕರ್ನಲ್ಲಿ ಇರಿಸಿದ್ದ 45,000/- ನಗದು ಮತ್ತು ವ್ಯಾನಿಟಿ ಬ್ಯಾಗ್ನಲ್ಲಿರಿಸಿದ್ದ 5 ಪವನ್ ತೂಕದ ಪಚ್ಚೆಕಲ್ಲು ಇರುವ ಚಿನ್ನದ ಬ್ರೇಸ್ಲೇಟ್, ಎರಡು 6 ಪವನ್ ತೂಕದ ಮುತ್ತಿನ ಬಳೆ, ಎರಡು 5½ ಪವನ್ ತೂಕದ ಚಿನ್ನದ ಖಡಗ ಬಳೆಗಳು, 6 ಪವನ್ ತೂಕದ ಚಿನ್ನದ ಸರ ಮತ್ತು 1 ಪವನ್ ತೂಕದ ಪೆಂಡೆಂಟ್, 6 ಪವನ್ ತೂಕದ ಮಲ್ಲಿಗೆ ಮೊಗ್ಗು ಚಿನ್ನದ ಸರ, 1½ ಪವನ್ ತೂಕದ ಚಿನ್ನದ ಸರ ಮತ್ತು ನೀಲಿ ಹರಳಿನ ಪೆಂಡೆಂಟ್, ಎರಡು ಜೊತೆ ನೀಲಿ ಕಲ್ಲಿನ ಬೆಂಡೋಲೆ ಮತ್ತು ಕರಮಣಿ ಹರಳಿನ ಬೆಂಡೋಲೆ, ಜುಮ್ಕಿ, ಗ್ರೇನೆಟ್ ಹರಳಿನ ನೆಕ್ಲೇಸ್, ಗ್ರೇನೆಟ್ ಹರಳಿನ ಬಳೆ, ಚಿನ್ನದ ನಾಣ್ಯ, ನಾಲ್ಕು ರೇಷ್ಮೇ ಸೀರೆ ಮತ್ತು ಒಂದು ಸಾಧಾರಣಾ ಸೀರೆಯನ್ನು ಕಳವುಗೈಯಲಾಗಿದೆ. ಕಳವಾದ ಒಟ್ಟು ಸೊತ್ತುಗಳ ಮೌಲ್ಯ 25 ಲಕ್ಷ ರುಪಾಯಿ ಆಗಿದೆ. ಉಡುಪಿ ನಗರ ಪೋಲಿಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.