- Advertisement -
- Advertisement -
ಉಪ್ಪಿನಂಗಡಿ: ಅಟೋ ರಿಕ್ಷಾ ಕಳವು ಮಾಡಿದ ಪ್ರಕರಣಕ್ಕೆ ಸಂಬoಧಿಸಿ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತರನ್ನು ಕೇರಳ ರಾಜ್ಯದ ಪಾತೂರು ಗ್ರಾಮದ ಸೀಂತೂರು ನಿವಾಸಿ ಯತಿರಾಜ್ (19) ಹಾಗೂ ಬಿಳಿನೆಲೆಬೈಲು ನಿವಾಸಿ ಸಂತೋಷ್ (18) ಎನ್ನಲಾಗಿದೆ.
ನಟ್ಟಿಬೈಲ್ ನಿವಾಸಿ ನವೀನ್ ಎಂಬವರ ಮನೆಯಲ್ಲಿ ನಿಲ್ಲಿಸಿದ್ದ ರಿಕ್ಷಾವು ಬೆಳಗಾಗುವಷ್ಟರಲ್ಲಿ ಕಳವಾಗಿತ್ತು. ಕೆಲವು ದಿನಗಳ ಬಳಿಕ ರಿಕ್ಷಾ ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿ ಪತ್ತೆಯಾಗಿದ್ದು, ಇದರ ಮಾಹಿತಿಪೊಲೀಸರಿಗೆ ನೀಡಿದ್ದು, ಆ ಸಂದರ್ಭ ಅದನ್ನು ಚಲಾಯಿಸಿಕೊಂಡು ಬಂದವ ಈ ರಿಕ್ಷಾವನ್ನು ತನ್ನ ಬಿಳಿನೆಲೆಯ ಗೆಳೆಯನಿಂದ ಪಡೆದುಕೊಂಡು ಬಂದಿದ್ದೆ ಎಂದು ತಿಳಿಸಿದ್ದಾನೆ. ಈ ಮಾಹಿತಿಯ ಪ್ರಕಾರ ಪೊಲೀಸರು ತನಿಖೆ ನಡೆಸಿ, ಈ ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
- Advertisement -