- Advertisement -
- Advertisement -
ಉಪ್ಪಿನಂಗಡಿ: ಬೆಳ್ಳಂಬೆಳಗ್ಗೆ ಗಂಡ ತನ್ನ ಹೆಂಡತಿಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಪೆರ್ನೆ ಸಮೀಪ ಡಿ.28 ರಂದು ಸಂಭವಿಸಿದೆ. ಹಲ್ಲೆಗೊಳಗಾದ ಮಹಿಳೆ ಲಕ್ಷ್ಮೀ (60) ಎನ್ನಲಾಗಿದೆ.
ಪೆರ್ನೆ ಹನುಮಾಜೆ ನಿವಾಸಿ ಶ್ರೀನಿವಾಸ ತನ್ನ ಪತ್ನಿ ಲಕ್ಷ್ಮೀಯವರಿಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಲಕ್ಷ್ಮೀ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
- Advertisement -