- Advertisement -
- Advertisement -
ಉಪ್ಪಿನಂಗಡಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದ೦ತೆ ಉಪ್ಪಿನಂಗಡಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಪುಂಜಾಲಕಟ್ಟೆ ಪೊಲೀಸ್ ಸ್ಟೇಷನ್ನ ನೂತನ ಠಾಣಾಧಿಕಾರಿ ಸುಕೇತ್ ಕೆ.ಪಿ ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಉಪ್ಪಿನಂಗಡಿಯಲ್ಲಿ ಗಲಭೆ ನಡೆದ ವೇಳೆ ಪ್ರತಿಭಟನಾಕಾರರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಗಲಭೆಯ ರೂವಾರಿ ಪುಂಜಾಲಕಟ್ಟೆ ಎಸ್.ಡಿ.ಪಿ.ಐ ಸದಸ್ಯ ಮತ್ತು ಬೆಳ್ತಂಗಡಿ ಎಸ್.ಡಿ.ಪಿ.ಐನ ಉಪಾಧ್ಯಕ್ಷ ಹನೀಫ್ನನ್ನು ಪುಂಜಾಲಕಟ್ಟೆ ಪೊಲೀಸ್ ಸ್ಟೇಷನ್ಗೆ ನೂತನ ಠಾಣಾಧಿಕಾರಿಯಾಗಿ ಆಯ್ಕೆಯಾದ, ಒಂದು ವಾರದೊಳಗೆ ಠಾಣಾಧಿಕಾರಿ ಸುಕೇತ್ ಕೆ.ಪಿ ಬಂಧಿಸಿದ್ದಾರೆ. ಆರೋಪಿಯನ್ನು ಉಪ್ಪಿನಂಗಡಿ ಠಾಣೆಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
- Advertisement -