- Advertisement -
- Advertisement -
ಉಳ್ಳಾಲ: ಕಂಟೈನರ್ ಚಾಲಕ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಮೆಸ್ಕಾಂ ಕಂಪನಿಗೆ ಸೇರಿದ ವಿದ್ಯುತ್ ಕಂಬಗಳನ್ನು ಹಾನಿ ಮಾಡಿ ಪರಾರಿಯಾದ ಘಟನೆ ಮುನ್ನೂರು ಗ್ರಾಮದ ಮದನಿನಗರ ಎಂಬಲ್ಲಿ ನಡೆದಿದೆ.
ಎಪ್ರಿಲ್ 10 ರಂದು ಕಂಟೈನರ್ ವಾಹನದ ಚಾಲಕ ಬೇಜಾವಬ್ದಾರಿಯಿಂದ ವಾಹನ ಚಲಾಯಿಸಿ ವಿದ್ಯುತ್ ಪರಿವರ್ತಕ ಕೇಂದ್ರದ ವಿದ್ಯುತ್ ಕಂಬಗಳಿಗೆ ಢಿಕ್ಕಿ ಹೊಡೆದಿದ್ದು ಅಪಾರ ಹಾನಿಯುಂಟಾಗಿದೆ.
ಈ ಹಿನ್ನೆಲೆ ಸರ್ಕಾರಿ ಸೌಮ್ಯಕ್ಕೆ ಒಳಪಟ್ಟ ಮೆಸ್ಕಾಂ ಕಂಪನಿಗೆ ಸುಮಾರು 3 ಲಕ್ಷ ರೂ ಹಾನಿಯಾಗಿದೆ ಎಂದು ಮೆಸ್ಕಾಂ ಉಳ್ಳಾಲ ಉಪವಿಭಾಗದ ಶಾಖಾಧಿಕಾರಿ ನಿತೇಶ್ ಹೆಚ್ ದೂರು ನೀಡಿದ್ದಾರೆ.
- Advertisement -