- Advertisement -
- Advertisement -
ಮಂಗಳೂರು: ಬೈಕ್ ನಲ್ಲಿ ತೆರಳುವಾಗ ಅಡ್ಡಗಟ್ಟಿ ವ್ಯಕ್ತಿಯೋರ್ವನ ಮೇಲೆ ಮೂವರು ಅಪರಿಚಿತರು ಹಲ್ಲೆ ಮಾಡಿರುವ ಘಟನೆ ಉಚ್ಚಿಲ ಬಳಿ ನಡೆದಿದೆ.
ತಲಪಾಡಿ ನಾರ್ಲಪದವು ನಿವಾಸಿ ಹರ್ಷಿತ್ ಮೇಲೆ ಹಲ್ಲೆ ಮಾಡಲಾಗಿದೆ.

ಹರ್ಷಿತ್ ತಡರಾತ್ರಿ ಔಷಧಿ ಖರೀದಿ ಮಾಡಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಉಚ್ಚಿಲದಲ್ಲಿ ಮೂವರು ಅಪರಿಚಿತರು ವಾಹನವನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ವಾಹನವನ್ನು ಅಪಹರಿಸಿಕೊಂಡು ಹೋಗಿದ್ದಾರೆಂದು ಆರೋಪಿಸಲಾಗಿದೆ.

ಘಟನೆಯಲ್ಲಿ ಗಾಯಗೊಂಡ ಹರ್ಷಿತ್ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

- Advertisement -