- Advertisement -
- Advertisement -
ಉಳ್ಳಾಲ: ಮಾವಿನಕಾಯಿ ಕೀಳಲು ಮರಹತ್ತಿದ ವೇಳೆ ವಿದ್ಯುತ್ ತಂತಿ ತಗಲಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಉಳ್ಳಾಲದ ಜಲಾಲ್ ಬಾಗ್ ನಲ್ಲಿ ಜೂ. 24ರ ಸಂಜೆ ವೇಳೆ ನಡೆದಿದೆ.
ಮಹಮ್ಮದ್ ಇಲಿಯಾಸ್ (21) ಮೃತ ದುರ್ದೈವಿ. ಹರೇಕಳ ಉಲ್ಲಾಸ್ ನಗರದ ನಿವಾಸಿಯಾದ ಮಹಮ್ಮದ್ ಇಲಿಯಾಸ್ ದೇರಳಕಟ್ಟೆಯ ಜಲಾಲ್ಭಾಗ್ನಲ್ಲಿರುವ ಫ್ಲೋರಿನ್ ಡಿಸೋಜಾ ಎಂವವರ ಮನೆ ಸಮೀಪದ ಕಂಪೌಂಡಿನಲ್ಲಿರುವ ಮಾವಿನಮರಕ್ಕೆ ಹಣ್ಣು ಕೀಳಲೆಂದು ಹತ್ತಿದ್ದಾರೆ. ಈ ವೇಳೆ ಕಬ್ಬಿಣದ ಸಲಾಕೆಯಲ್ಲಿ ಕಾಯಿ ಕೀಳುತ್ತಿದ್ದಾಗ ಅವಘಡ ಸಂಭವಿಸಿದೆ.
ಯುವಕನ ಸಾವಿಗೆ ಮೆಸ್ಕಾಂ ಇಲಾಖೆಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ . ಮಾವಿನ ಮರದ ಮೇಲೆ ವಿದ್ಯುತ್ ತಂತಿ ಹಾದುಹೋಗಿದ್ದರೂ ಅದನ್ನು ಕಟಾವು ನಡೆಸದೆ ಇದ್ದುದರಿಂದ ಘಟನೆ ನಡೆದಿರುವುದಾಗಿ ಆರೋಪಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -