Friday, June 27, 2025
spot_imgspot_img
spot_imgspot_img

ಒಕ್ಕೆತ್ತೂರು: ವಯೋ ನಿವೃತ್ತಿ ಹೊಂದಿದ ಒಕ್ಕೆತ್ತೂರು ಶಾಲಾ ಮುಖ್ಯ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ

- Advertisement -
- Advertisement -

ಒಕ್ಕೆತ್ತೂರು: ದ.ಕ.ಜಿ.ಪಂ.ಮಾ.ಹಿ.ಪ್ರಾ.ಶಾಲೆ ಒಕ್ಕೆತ್ತೂರು ಇಲ್ಲಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕ ಮುದರ ಬೈರ ಎಸ್ ಇವರಿಗೆ ಸನ್ಮಾನ ಸಮಾರಂಭವು ಎಸ್ ಡಿ ಎಮ್ ಸಿ ಅಧ್ಯಕ್ಷ ಮಹಮ್ಮದ್ ಹಾರೀಶ್ ಸಿ ಹೆಚ್ ವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಭಾರ ಮುಖ್ಯ ಶಿಕ್ಷಕಿ ಮೇರಿ ಡಿಸೋಜ ಇವರು ಪ್ರಾರ್ಥನೆ ಹಾಗೂ ಪ್ರಾಸ್ತಾವಿಕ ಮಾತಿನೂಂದಿಗೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿಯವರು ಶಾಲೆಯ ಅಭಿವೃದ್ಧಿ ಮತ್ತು ಶಿಕ್ಷಕರ ಪರಿಶ್ರಮದ ಬಗ್ಗೆ ಹಾಗೂ ಸರ್ಕಾರಿ ಶಾಲೆಗಳ ಸಬಲೀಕರಣದ ಬಗ್ಗೆ ಸಾಂದರ್ಭೋಜಿತವಾಗಿ ಮಾತನಾಡಿದರು.

driving

ನಿವೃತ್ತ ಮುಖ್ಯಶಿಕ್ಷಕರ ಬಗ್ಗೆ ನಿವೃತ್ತ ಮುಖ್ಯಶಿಕ್ಷಕಿ ಪುಷ್ಪ, ನಾರ್ಶ ಪ್ರೌಢ ಶಾಲೆಯ ಶಿಕ್ಷಕಿ ಭಾರತಿ ಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬಂಟ್ವಾಳ ತಾಲೂಕು ಘಟಕದ ಕಾರ್ಯದರ್ಶಿಗಳಾದ ಯತೀಶ್ , ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಇಸ್ಮಾಯಿಲ್ ಕೆ. ವಿಟ್ಲ ಸಮೂಹ ಸಂಪನ್ಮೂಲ ವ್ಯಕ್ತಿಯಾದ ರವಿ ಪ್ರಸಾದ್ ಮಾತನಾಡಿದರು.

ವೇದಿಕೆಯಲ್ಲಿ ಸುರಿಬೈಲು ಶಾಲೆಯ ಮುಖ್ಯ ಶಿಕ್ಷಕ ಗೋಪಾಲ್ ,ಎಸ್ ಡಿ ಎಮ್ ಸಿ ಉಪಾಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ರಾಣಿಕಲಾ ಎನ್, ಸುಮಿತ್ರಾ ಎನ್, ಜ್ಯೋತಿ, ಪ್ರಿಯಲತಾ , ಗೋಡ್ಸಿ ರೋಶನಿ ಮಿನೇಜಸ್ ಸಹಕರಿಸಿದರು.ಸಹ ಶಿಕ್ಷಕ ತೌಸಿಫ್ ಅಹ್ಮದ್ ನಿರೂಪಿಸಿದರು.

- Advertisement -

Related news

error: Content is protected !!