- Advertisement -
- Advertisement -
ತಿರುವನಂತಪುರಂ: ಕಳೆದ ಓಣಂ ಬಂಪರ್ ಲಾಟರಿ ಪ್ರಥಮ ಬಹುಮಾನ 25 ಕೋಟಿ ರೂ ಲಭಿಸಿದ ತಿರುವನಂತಪುರಂ ನಿವಾಸಿ ಅನೂಪ್ ಲಾಟರಿ ವ್ಯಾಪಾರ ಆರಂಭಿಸಿದ್ದಾರೆ. ಈ ಹಿಂದೆ ಆಟೊ ಚಾಲಕನಾಗಿದ್ದ ಅನೂಪ್, ಕಳೆದ ಶುಕ್ರವಾರದಂದು ತಿರುವನಂತಪುರಂ ಮನ್ನಾರ್ ಕಾಡ್ ಎಂಬಲ್ಲಿ ಲಾಟರಿ ವ್ಯಾಪಾರ ಆರಂಭಿಸಿದ್ದಾರೆ.
25 ಕೋಟಿ ಲಾಟರಿ ಲಭಿಸಿದ ನಂತರ ಆಟೋ ಚಾಲನೆ, ಅನೂಪ್ ಗೆ ಸಮಸ್ಯೆ ತಂದೊಡ್ಡಿತ್ತು. ಪ್ರಯಾಣಿಕರು ಬಾಡಿಗೆ ಕೊಡದೇ ಸತಾಯಿಸುತ್ತಿದ್ದರಿಂದ ಇವರಿಗೆ ತಲೆನೋವಾಗಿ ಪರಿಣಮಿಸಿತು. ಈ ಹಿನ್ನೆಲೆ ಸ್ವತಃ ತಾವೇ ಲಾಟರಿ ವ್ಯಾಪಾರ ಆರಂಭಿಸಿದ್ದಾರೆ. 25 ಕೋಟಿಯ ಭಾಗ್ಯವಂತನ ಕೈಯಿಂದ ಲಾಟರಿ ಖರೀದಿಸಲು ಜನರು ಮುಗಿ ಬೀಳುತ್ತಿದ್ದಾರೆ ಎಂಬ ವರದಿಯೂ ಇದೆ.
- Advertisement -