- Advertisement -
- Advertisement -
ಕಕ್ಯೆಪದವು: ಅಕ್ರಮವಾಗಿ ಜಾನುವಾರು ಸಾಗಟ ಮಾಡುತ್ತಿರುವುದನ್ನು ಹಿಂ.ಜಾ.ವೇ ಕಾರ್ಯಕರ್ತರು ಪತ್ತೆ ಹಚ್ಚಿ ಪೊಲೀಸರಿಗೊಪ್ಪಿಸಿದ ಘಟನೆ ಕಕ್ಯೆಪದವಿನ ಉಳಿ ಎಂಬಲ್ಲಿ ನಡೆದಿದೆ.
ಕಕ್ಯೆಪದವು ಸಮೀಪದ ಉಳಿ ಎಂಬಲ್ಲಿ ಪುತ್ತಿಗೆ ಕಡೆ KA19AC1851 ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಟ ಮಾಡುತ್ತಿರುವ ಮಾಹಿತಿ ತಿಳಿದು ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಪುಂಜಾಲಕಟ್ಟೆ ಪೋಲೀಸರಿಗೆ ಮಾಹಿತಿ ನೀಡಿದ್ದು ಪೋಲೀಸರು ವಾಹನದಲ್ಲಿದ್ದ ದನ, ವಾಹನ ಹಾಗೂ ಆರೋಪಿ ರಫೀಕ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
- Advertisement -