- Advertisement -
- Advertisement -
ಭಾರತ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಎಲ್ಲೆಲ್ಲೂ ತ್ರಿವರ್ಣ ರಂಗು ಮೇಳೈಸಿದೆ. ದೇವಾಲಯ, ಮಸೀದಿ, ಚರ್ಚ್, ಪ್ರಾರ್ಥನಾಲಯಗಳು, ಕಟ್ಟಡಗಳು, ಕಛೇರಿಗಳು ತ್ರಿವರ್ಣ ರಂಗಿನಲ್ಲಿ ಮಿಂದೇಳುತ್ತಿದೆ.
ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಇಂದಿನ ಅಲಂಕಾರವೂ ಭಕ್ತರನ್ನು ಸಂತೃಪ್ತಗೊಳಿಸಿದೆ. ಕೇಸರಿ, ಬಿಳಿ ಹಸಿರಿನ ಸೀರೆ ದೇವಿಗೆ ಇನ್ನಷ್ಟು ಕಳೆತುಂಬಿದೆ. ಅದರೊಂದಿಗೆ ತ್ರಿವರ್ಣ ಬಣ್ಣದ ಹೂವಿನ ಅಲಂಕಾರ ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು ಎಂಬಂತಿದೆ.
- Advertisement -