- Advertisement -
- Advertisement -
ಕಡಬ: ಕಡಬದ ಕಳಾರ ಎಂಬಲ್ಲಿ ದಿನಸಿ ಅಂಗಡಿಯೊಂದರಿಂದ 4 ಲಕ್ಷ ರೂ.ನಗದು ಕಳವಾಗಿರುವುದಾಗಿರುವ ಬಗ್ಗೆ ಕಡಬ ಪೊಲೀಸರಿಗೆ ದೂರು ನೀಡಲಾಗಿದೆ.
ಕಳಾರ ಮೊಯ್ದೀನ್ ಕುಂಞಿ ಎಂಬವರ ಮಗ ಇಸ್ಮಾಯಿಲ್ ಎಂಬವರ ಅಂಗಡಿಯಿಂದ ಈ ಕೃತ್ಯ ಎಸಗಲಾಗಿದೆ. ಅವರು ಕಡಬ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಬದಿಯಲ್ಲಿ ದಿನಸಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದು ಫೆ.27ರ ರಾತ್ರಿ ಕಳವು ಮಾಡಲಾಗಿದೆ.
ಡಿ.ಇಸ್ಮಾಯಿಲ್ ಎಂಬವರ ಮನೆಯನ್ನು ಲೀಸಿಗೆ ಪಡೆದುಕೊಂಡಿದ್ದ ಹುಸೈನ್ ಎಂಬವರು ಅವರಿಗೆ ನೀಡಿದ್ದ 3 ಲಕ್ಷ ರೂ.ಹಾಗೂ ಅಂಗಡಿಯಲ್ಲಿ ಕೂಡಿಟ್ಟಿದ್ದ 1 ಲಕ್ಷ ರೂ.ಸೇರಿದಂತೆ ಒಟ್ಟು 4 ಲಕ್ಷ ರೂ.ಗಳನ್ನು ಯಾರೋ ಕಳ್ಳರು ಅಂಗಡಿಗೆ ನುಗ್ಗಿ ಕಳವು ಮಾಡಿಕೊಂಡು ಹೋಗಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -