- Advertisement -
- Advertisement -
ಕಡಬ: ರಸ್ತೆಯಲ್ಲಿ ಬಿದ್ದು ಸಿಕ್ಕಿದ ಚಿನ್ನದ ಸರವನ್ನು ಕಡಬ ಠಾಣೆಯಲ್ಲಿ ವಾರೀಸುದಾರರಿಗೆ ಹಸ್ತಾಂತರ ಮಾಡಿದ ಘಟನೆ ಕಡಬದಲ್ಲಿ ನಡೆದಿದೆ.
ಕಡಬದ ಫೆಡರಲ್ ಬ್ಯಾಂಕ್ ಶಾಖೆ ಸಮೀಪ ಬ್ಯಾಂಕ್ನ ಸಿಬ್ಬಂದಿ ಜೆರಿನ್ ಎಂಬವರಿಗೆ ಚಿನ್ನದ ಸರವೊಂದು ಬಿದ್ದು ಸಿಕ್ಕಿತ್ತು. ಜೆರಿನ್ರವರು ಚಿನ್ನದ ಸರವನ್ನು ವರದಿಗಾರ ಪ್ರಕಾಶ್ರವರಿಗೆ ತಲುಪಿಸಿದ್ದು ಪ್ರಕಾಶ್ರವರು ಸರವನ್ನು ಕಡಬ ಪೊಲೀಸ್ ಠಾಣೆಯ ಎ.ಎಸ್.ಐ ಸುರೇಶ್ ರವರ ಮೂಲಕ ಠಾಣೆಗೆ ನೀಡಿದ್ದರು.
ಈ ಚಿನ್ನದ ಸರದ ವಾರಸುದಾರರು ಸರಿಯಾದ ಮಾಹಿತಿ, ತೂಕ ಅಥವಾ ದಾಖಲೆಗಳನ್ನು ನೀಡಿ ಕಡಬ ಪೊಲೀಸ್ ಠಾಣೆಯಿಂದ ಚಿನ್ನದ ಸರವನ್ನು ಪಡೆದುಕೊಳ್ಳಬಹುದು ಎ೦ದು ಕಡಬ ಎಸ್.ಐ ಆಂಜನೇಯ ರೆಡ್ಡಿ ಮನವಿ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡಿತ್ತು. ಬಳಿಕ ಮಾಹಿತಿ ತಿಳಿದ ಚಿನ್ನದ ಸರದ ವಾರೀಸುದಾರರಾದ ಐತ್ತೂರು ಗ್ರಾಮದ ಸುಂಕದಕಟ್ಟೆ ನಿವಾಸಿ ನಿಯಾಜ್ ಅವರ ಪತ್ನಿ ಫಾತಿಮತ್ರವರು ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡಿದರು. ಬಳಿಕ ಠಾಣೆಯಲ್ಲಿ ಅವರಿಗೆ ಚಿನ್ನದ ಸರ ಹಸ್ತಾಂತರಿಸಲಾಯಿತು.
- Advertisement -